RRR ಸಿನಿಮಾ ಬಿಡುಗಡೆ ಮಾಡಿದರೆ, ಥಿಯೇಟರ್ಗಳಿಗೆ ಬೆಂಕಿ: ರಾಜಮೌಳಿಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಬೆದರಿಕೆ!
ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ಮಾಣದ RRR ಸಿನಿಮಾ ಬಿಡುಗಡೆ ಮಾಡಿದಲ್ಲಿ ಥಿಯೇಟರ್ ಗೆ ಬೆಂಕಿ ಹಚ್ಚುವುದಾಗಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಬೆದರಿಕೆ ಹಾಕಿದ್ದಾರೆ.
ರಾಜಮೌಳಿ ನಿರ್ದೇಶನದ ಸ್ವಾತಂತ್ರ್ಯ ಹೋರಾಟಗಾರ ಕೊಮರಾಮ್ ಭೀಮ್ ಅವರ ಜೀವನಾಧಾರಿತ RRR ಸಿನಿಮಾದಲ್ಲಿ ನಿರ್ಮಾಣ ಪೂರ್ಣಗೊಳ್ಳಲಾಗಿದೆ. ಸಿನಿಮಾದಲ್ಲಿ ರಾಮ್ ಚರಣ್, ಜೂ. ಎನ್ ಟಿಆರ್, ಅಜೇಯ್ ದೇವಗನ್ ಹಾಗೂ ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಗಣವೇ ತುಂಬಿದೆ. ಸ್ವಾತಂತ್ರ್ಯ ಹೋರಾಟಗಾರ ಕೊಮರಾಮ್ ಭೀಮ್ ಪಾತ್ರವನ್ನು ಜೂ. ಎನ್ ಟಿಆರ್ ನಿಭಾಯಿಸುತ್ತಿದ್ದಾರೆ.
ಆದರೆ ಕೊಮರಾಮ್ ಭೀಮ್ ಅವರ ಜೀವನವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಭೀಮ್ ಅವರು ಬುಡಕಟ್ಟು ಜನರ ನೆಲ-ಜಲಕ್ಕಾಗಿ ಹೋರಾಡಿದವರು. ಅವರನ್ನು ಈಗ ಅಲ್ಪಸಂಖ್ಯಾತರ ವ್ಯಕ್ತಿಯ ರೀತಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಕುಮಾರ್ ಆರೋಪಿಸಿದ್ದು, ಸಿನಿಮಾ ಬಿಡುಗಡೆಯಾದರೆ ಥಿಯೇಟರ್ಗಳಿಗೆ ಬೆಂಕಿ ಹಚ್ಚುವುದಾಗಿ ರಾಜಮೌಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬಿಜೆಪಿಗೆ ಮತ ಕೇಳುವ ಭರದಲ್ಲಿ ಕಾಂಗ್ರೆಸ್ಗೆ ಮತಹಾಕಿ ಎಂದ ಜ್ಯೋತಿರಾಧಿತ್ಯಾ ಸಿಂಧಿಯಾ: ಕೈ ಕಾರ್ಯಕರ್ತರಿಂದ ಟ್ರೋಲ್