ಖಿನ್ನತೆಗೆ ಒಳಗಾಗಿ ಮಹಿಳಾ ಸಿಐಡಿ ಡಿವೈಎಸ್ ಪಿ ಆತ್ಮಹತ್ಯೆಗೆ ಶರಣು…!
ಖಿನ್ನತೆಗೆ ಒಳಗಾಗಿದ್ದ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ ಬೆಂಗಳೂರಿನ ಸ್ನೇಹಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೌಟುಂಬಿಕ ಕಲಹ ಹಾಗೂ ಖಿನ್ನತೆಯಿಂದಾಗಿ ಡಿವೈಎಸ್ ಪಿ ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ನಾಗರಬಾವಿ ವಿನಾಯಕ ಲೇಔಟ್ ನಲ್ಲಿರುವ ಸ್ನೇಹಿತೆ ಮನೆಗೆ ತೆರಳಿದ್ದ ಲಕ್ಷ್ಮಿ ನಿನ್ನೆ ರಾತ್ರಿ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಕುಡಿಯುತ್ತಿದ್ದ ಅವರು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎನ್ನಲಾಗಿದೆ.
2012ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮಿಗೆ ಮಕ್ಕಳಾಗಿರಲಿಲ್ಲ. ಕುಡಿತದ ಚಟದಿಂದ ಬೇಸತ್ತ ಗಂಡನ ಮಧ್ಯೆಯೂ ಮನಸ್ತಾಪವಾಗಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಹೈದರಾಬಾದ್ ನಲ್ಲಿ ಕೆಲಸ ಮಾಡ್ತಾಯಿದ್ರು. ಬೆಂಗಳೂರಿಗೆ ಆಗಾಗ ಬಂದು ಹೋಗ್ತಾಯಿದ್ರು. ಆದ್ರೆ ಲಕ್ಷ್ಮಿ ಅವರ ಅಧಿಕ ಕುಡಿತದ ಚಟ ಗಂಡನಿಗೂ ಬೇಸರ ತಂದಿತ್ತು ಎನ್ನಲಾಗುತ್ತಿದೆ.
ಕುಡಿತ ಚಟದಲ್ಲಿ ಬಿದ್ದ ಲಕ್ಷ್ಮಿ ಕೌನ್ಸಲಿಂಗ್ ಕೂಡ ಮಾಡಿಸಿಕೊಂಡಿದ್ದರು. ಈಕೆಯನ್ನು ಪರೀಕ್ಷಿಸಿದ ವೈದ್ಯರು ಕುಡಿತ ಬಿಡಲು ಸಲಹೆ ನೀಡಿದ್ದರೂ ಲಕ್ಷ್ಮೀ ಕುಡಿಯುವುದನ್ನ ನಿಲ್ಲಿಸಿರಲಿಲ್ಲ. ಅದೆಷ್ಟೋ ಬಾರಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎನ್ನಲಾಗುತ್ತದೆ. ಕೆಲಸಕ್ಕೂ ಆಕೆ ಮಧ್ಯೆ ಸೇವಿಸ ಬರುತ್ತಿದ್ದಳು ಎನ್ನಲಾಗುತ್ತದೆ. ಸಂಸರಾದಲ್ಲಿ ಜಿಗುಪ್ಸೆ, ಮಾನಸಿಕ ಖಿನ್ನತೆಗೆ ಒಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೋಡಕ್ಕೆ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಮಾಡಲಾಗುತ್ತಿದೆ.
ಮೂಲತಃ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಯವರಾದ ಲಕ್ಷ್ಮೀ ತಂದೆ ಬಿಬಿಎಂಪಿಯ ಉನ್ನತ ಅಧಿಕಾರಿ ಎಂದು ಗೊತ್ತಾಗಿದೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.