ಸದನದಲ್ಲೂ ‘ಬಟ್ಟೆ’ ಚರ್ಚೆ : ಟ್ವೀಟ್ ನಲ್ಲೂ ಸಿದ್ದರಾಮಯ್ಯ ‘ಬಟ್ಟೆ’ ಬಾಂಬ್!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರ ವಿಪಕ್ಷ ನಾಯಕರಿಂದ ಪ್ರಸ್ತಾಪವಾಗುತ್ತಲೇ ಇದೆ.

ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿಯನ್ನು ಗುರಿಯಾಗಿಸಿಕೊಂಡು ವಿಪಕ್ಷ ನಾಯಕ ಬಟ್ಟೆ ಬಾಂಬ್ ಸಿಡಿಸಿದ್ದಾರೆ. ಮೊನ್ನೆಯಷ್ಟೇ ಸದನದಲ್ಲಿ ‘ಬಟ್ಟೆ’ ಚರ್ಚೆ ಮಾಡಲಾಗಿತ್ತು ಸದ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್  ಮಾಡುವ ಮೂಲಕ ಬಟ್ಟೆ ಬಾಂಬ್ ಸಿಡಿಸಿದ್ದಾರೆ.

ಸದನದಲ್ಲಿ ಸಿದ್ದರಾಮಯ್ಯ ಈ ಹಿಂದೆ ಅಂಗಡಿಯೊಂದರಲ್ಲಿ 90 ಜತೆ ಬಟ್ಟೆ ಖರೀದಿ ಮಾಡಿದ್ದರು ಎನ್ನುವ ವಿಚಾರ ಪ್ರಸ್ತಾಪವಾಗಿತ್ತು. ಇದಕ್ಕೆ ಟಾಂಗ್ ಕೊಟ್ಟಿದ್ದ ಸಿದ್ದರಾಮಯ್ಯ ‘ಬಟ್ಟೆ ಬಗ್ಗೆ ಮಾತನಾಡಲಿ. ಬಟ್ಟೆ ಕಳಚೋ ಬಗ್ಗೆ ಮಾತು ಬೇಡ’ ಎಂದಿದ್ದಾರೆ.

ಸಿದ್ದರಾಮಯ್ಯ ಬಟ್ಟೆ ಖರೀದಿ ವಿಚಾರವಾಗಿ ‘ ನನ್ನ ಬಟ್ಟೆ ನಾನೇ ತೆಗೆದುಕೊಳ್ಳೋದು. ಕೆಲವರ ಮನೆಯಲ್ಲಿ ಅವರವರ ಹೆಣ್ಮಕ್ಕಳು ಖರೀದಿ ಮಾಡ್ತಾರೆ. ಇನ್ನ ಕೆಲವರಿಗೆ ಯಾರ್ಯಾರೋ ಖರೀದಿ ಮಾಡ್ತಾರೆ’ ಎಂದಿದ್ದರು.

ಈ ಬಗ್ಗೆ ಟ್ವೀಟ್ ರ್ ನಲ್ಲೂ ಪ್ರಸ್ತಾಪಿಸಿದ ಟಗರು, ‘ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆದುಕೊಳ್ಳುತ್ತಿರುವ  ನಾಯಕರಿಗೆ ದಾನ ಮಾಡೋಣ ಎಂದು ನಾನು 90 ಬಟ್ಟೆ ಖರೀದಿ ಮಾಡಿದ್ಧೇನೆ. ಬೇಕಾದರೆ ನಳೀನ್ ಕುಮಾರ್ ಕಟೀಲ್ ಗೂ ಬಟ್ಟೆ ದಾನ ಮಾಡೋಣ. ಇನ್ನೂ ಹೆಚ್ಚು ಸಿಡಿ ಇದಾವಂತೆ ಅವರ ಮಾತುಗಳು ಹಿಡಿತದಲ್ಲಿ ಇರಲಿ’ ಎಂದು ವ್ಯಂಗ್ಯವಾಗಿಡಿದ್ದಾರೆ.

ಇದು ನೇರವಾಗಿ ರಮೇಶ್ ಜಾರಕಿಹೊಳಿಯವರನ್ನು ಗುರಿಯಾಗಿಟ್ಟುಕೊಂಡು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights