ಕಾಂಗ್ರೆಸ್ ಟೂಲ್ಕಿಟ್: ದೆಹಲಿ ಪೊಲೀಸರಿಂದ ಟ್ವಿಟರ್ ಇಂಡಿಯಾದ ಮುಖ್ಯಸ್ಥರ ವಿಚಾರಣೆ!
ದೆಹಲಿ ಮತ್ತು ಗುರಗಾಂವ್ನಲ್ಲಿರುವ ಟ್ವಿಟರ್ ಇಂಡಿಯಾದ ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸಿದ ಒಂದು ವಾರದ ಬಳಿಕ, ದೆಹಲಿ ಪೊಲೀಸರ ವಿಶೇಷ ತಂಡವು ಬೆಂಗಳೂರಿನಲ್ಲಿರುವ ಮೈಕ್ರೋಬ್ಲಾಗಿಂಗ್ ಸೈಟ್ನ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, “ಕಾಂಗ್ರೆಸ್ ಟೂಲ್ಕಿಟ್” ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ತಂಡವು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರನ್ನು ಮೇ 31 ರಂದು ವಿಚಾರಣೆ ನಡೆಸಿದೆ.
“ಕಾಂಗ್ರೆಸ್ ಟೂಲ್ಕಿಟ್” ಎಂದು ಬಿಜೆಪಿ ನಾಯಕ ಸಾಂಬಿತ್ ಪಾತ್ರಾ ಟ್ವೀಟ್ ಮಾಡಿರುವ ಬಗ್ಗೆ ಪೊಲೀಸರು ಟ್ವಿಟ್ಟರ್ಗೆ ಎರಡು ನೋಟಿಸ್ ಕಳುಹಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರ ಉತ್ತರಗಳು ಅಸ್ಪಷ್ಟವಾಗಿವೆ. ಆದ್ದರಿಂದ ನಾವು ಅವರಿಗೆ ಮೂರನೇ ನೋಟಿಸ್ ನೀಡಲು ಟ್ವಿಟರ್ ಇಂಡಿಯಾದ ಕಚೇರಿಗಳಿಗೆ ತೆರಳಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.
“ಕಾಂಗ್ರೆಸ್ ಟೂಲ್ಕಿಟ್”ನ ಸ್ಕ್ರೀನ್ಶಾಟ್ಗಳನ್ನು ಹೊಂದಿರುವ ಪತ್ರಾ ಅವರ ಟ್ವೀಟ್ ಅನ್ನು ಟ್ವಿಟರ್ “ತಿರುಚಲ್ಪಟ್ಟ ಮಾಧ್ಯಮ” ಎಂದು ಲೇಬಲ್ ಮಾಡಿದೆ.
“ಟೂಲ್ಕಿಟ್” ಎಂದು ಆರೋಪಿಸಿ ನಕಲಿ ದಾಖಲೆಗಳನ್ನು ಟ್ವೀಟ್ ಮಾಡಿದ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಎಫ್ಐಆರ್ ದಾಖಲಿಸಿದೆ.
ಇದನ್ನೂ ಓದಿ: ಲಂಚ ಪ್ರಕರಣ: ಕೇರಳ ಬಿಜೆಪಿ ಅಧ್ಯಕ್ಷರ ವಿರುದ್ದ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ!