ಕೆಜಿಎಫ್ ಸಹ ಕಲಾವಿದರಿಂದ ಕಿಡ್ನ್ಯಾಪ್ : ವಕೀಲನನ್ನು ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ !

ಸಾಮಾನ್ಯವಾಗಿ ಕಿಡ್ನ್ಯಾಪ್ ಕೇಸ್ ಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಕಿಡ್ಯ್ನಾಪರ್ಸ್ ಹಣಕ್ಕಾಗಿ ಮತ್ತು ಹಳೆ ಸೇಡಿಗಾಗಿ ಸಿನಿಮಾ ಶೈಲಿಯಲ್ಲಿ ಅಪಹರಿಸುತ್ತಾರೆ. ಆದರೆ ಸಿನಿಮಾದ ಕೆಲ ಸಹಕಲಾವಿದರೇ ಹಣಕ್ಕಾಗಿ ಕಿಡ್ಯ್ನಾಪ್ ಮಾಡಿದ ಘಟನೆ ಬೆಂಗಲೂರಿನಲ್ಲಿ ನಡೆದಿದೆ.

ಹೌದು.. ಸೆ.20 ರಂದು ಬೆಂಗಳೂರಿನಲ್ಲಿ ಅನ್ನಪೂರ್ಣೇಶ್ವರಿ ನಗರದ ನಿವಾಸಿ ವಕೀಲ ಅಭಯ್ ರವೀಂದ್ರ ಕುಲಕರ್ಣಿ ಎಂಬುವರನ್ನು ಆರೋಪಿಗಳು ಅಪಹರಿಸಿ 10 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ವಕೀಲರ ಮನೆಗೆ ಕರೆ ಮಾಡಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ವಕೀಲರನ್ನು ಅಪಹರಿಸಿ 12 ಗಂಟೆ ಕಳೆಯುವ ಹೊತ್ತಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಇನ್ಪ್ಸೆಕ್ಟರ್ ಲೋಹಿತ್ ಯಶಸ್ವಿಯಾಗಿದ್ದಾರೆ.

ಪ್ರಕರಣದಲ್ಲಿ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಕೆಲವರು ಅನ್ಯರಾಜ್ಯದವರು ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

ಆರೋಪಿ ಸಂಜಯ್ ಕನ್ನಡ ಭಜರಂಗಿ, ಕೆಜಿಎಫ್, ಭರ್ಜರಿ ಹಾಗೂ ತೆಲುಗು ಸಿನಿಮಾದಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾನೆ. ಇನ್ನೂ ಸಿದ್ದೇಶ್ ಸಿನಿಮಾಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಾರಣದಿಂದ ಈ ಸಹ ಕಲಾವಿದರ ಜೊತೆ ಪರಿಚಯ ಬೆಳೆಸಿಕೊಂಡಿದ್ದರಂತೆ.

ಸಹ ಕಲಾವಿದರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಅವರು ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಅವರನ್ನು ಸಿನಿಮಾ‌ ಸ್ಟೈಲ್​ನಲ್ಲಿ ಎರಡು ಫಾರ್ಚ್ಯೂನರ್ ಕಾರಿನಲ್ಲಿ ಬಂದು ಅಪಹರಿಸುತ್ತಾರೆ.ಅಪಹರಿಸಿದ ನಂತರ ಅಂದ್ರಹಳ್ಳಿಯ ಕಚೇರಿಯಲ್ಲಿ ಇಟ್ಟು, ರವೀಂದ್ರ ಅವರ ಮೊಬೈನ್​ನಿಂದ ಲೊಕೇಷನ್ ಕಳುಹಿಸಿ ಸಿಕ್ಕಿ ಬಿದ್ದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights