ನಾನೂ ಹಿಂದೂ; ಆದರೆ ಹಿಂದೂತ್ವವಾದಿ ಅಲ್ಲ: ರಾಹುಲ್ ಗಾಂಧಿ
ಭಾರತವು ಹಿಂದೂಗಳ ದೇಶ. ಆದ್ರೆ ಹಿಂದುತ್ವ ವಾದಿಗಳ ದೇಶವಲ್ಲ. ನಾನೂ ಕೂಡಾ ಹಿಂದೂ. ಆದರೆ ನಾನು ಎಂದಿಗೂ ಹಿಂದುತ್ವ ವಾದಿ ಅಲ್ಲ ಎಂದು ರಾಹುಲ್ಗಾಂಧಿ ಹೇಳಿದ್ದಾರೆ.
ಹಿಂದುತ್ವದ ಹೆಸರಲ್ಲಿ ಬಿಜೆಪಿಗರು ಅಧಿಕಾರದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಹಣಉಬ್ಬರ ಹೆಚ್ಚಾಗಲು, ಇಂಧನ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು, ದೇಶದ ಜನರು ಬೆಲೆ ಏರಿಕೆಯಿಂದ ನರಳಲು ಹಿಂದುತ್ವ ವಾದಿಗಳೇ ಕಾರಣ ಕಾರಣ ಎಂದು ಅವರು ಕಿಡಿಕಾರಿದ್ದಾರೆ.
ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದ್ದರೂ ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೂ, ಹಿಂದುತ್ವ ವಾದಿಗಳು ಅಧಿಕಾರ ಬಿಟ್ಟುಕೊಡಲು ತಯಾರಿಲ್ಲ. ಪ್ರಧಾನಿ ಮೋದಿ ಹಾಗೂ ಅವರ ನಾಲ್ಕು ಸ್ನೇಹಿತರು ಇಡೀ ದೇಶವನ್ನೇ ಹಾಳು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.
ಇದನ್ನೂ ಓದಿ: ಭಾರತ-ಬಾಂಗ್ಲಾ ಗಡಿಯಲ್ಲಿ ಅರಳಿದ ಪ್ರೀತಿ; ಭಾರತದಲ್ಲಿರುವ ದಂಪತಿಗಳಿಗೆ NRC ಕುಣಿಕೆಯ ಭೀತಿ!