FACT CHECK | ಮಸೀದಿಗಳಿಗೆ ಬಾಣ ಬಿಟ್ಟಂತೆ ನಟಿಸಿ ಸೋತ್ತಿದ್ದ ಬಿಜೆಪಿಯ ಮಾಧವಿ ಲತಾ ಈಗ ಮುಸ್ಲಿಂ ಪರ ಮಾತನಾಡಿದರೇ?

ಮಾಧವಿ ಲತಾ ಅವರು AIMIMನ ಅಸಾದುದ್ದೀನ್ ಓವೈಸಿ ವಿರುದ್ಧ ಹೈದರಾಬಾದ್‌ನಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 3,38,087 ಮತಗಳ ದೊಡ್ಡ ಅಂತರದಿಂದ ಸೋತಿದ್ದಾರೆ. ಲತಾ ಅವರು ತಮ್ಮ ಮುಸ್ಲಿಂ ವಿರೋಧಿ ಪ್ರಚಾರಗಳು ಮತ್ತು ಹೇಳಿಕೆಗಳಿಂದ ಟೀಕೆಗೆ ಗುರಿಯಾಗಿದ್ದರು, ಅವರು ಹೈದರಾಬಾದ್‌ನ ಮತದಾನ ಕೇಂದ್ರದಲ್ಲಿ ಮಹಿಳಾ ಮುಸ್ಲಿಂ ಮತದಾರರು ತಮ್ಮ ಬುರ್ಖಾಗಳನ್ನು ತೆಗೆದುಹಾಕಲು ಮತ್ತು ತಮ್ಮ ಗುರುತನ್ನು ಸಾಬೀತುಪಡಿಸಲು ಒತ್ತಾಯಿಸಿದ ಘಟನೆ ಸೇರಿದಂತೆ, ಮಸೀದಿಗೆ ಬಾಣ ಬಿಡುವಂತೆ ನಟಿಸಿ ದೇಶದಾದ್ಯಂತ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಮಾಧವಿ ಲತಾ ಈಗ ಮುಸ್ಲಿಮರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಚುನಾವಣೆಯಲ್ಲಿ ಸೋತ ಬಳಿಕ ಮುಸ್ಲಿಮರು ನೆನಪಾಗಿದ್ದಾರೆ ಎಂದು  ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ತಾನು ಈ ಹಿಂದೆ ಅವಮಾನಿಸಿದ ಸಮುದಾಯದ ಬಗ್ಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ. ಹಾಗಿದ್ದರೆ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವೀಡಿಯೋ ಏಪ್ರಿಲ್ 2024 ರಂದು ಲತಾ ಅವರು ಇನ್ನೂ ಚುನಾವಣಾ ಪ್ರಚಾರದಲ್ಲಿದ್ದ ಸಂದರ್ಭದಲ್ಲಿ ಹೇಳಿದ ಮಾತು. ಲತಾ ಅವರು ಚುನಾವಣಾ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆಯೇ ಹೊರತು ಸೋತ ನಂತರ ಅಲ್ಲ ಎಂದು ಬೂಮ್ ವರದಿ ಮಾಡಿದೆ.

ಮಾದವಿ ಲತಾ ಅವರ ಹೇಳಿಕೆಯನ್ನು ಕೀವರ್ಡ್ ಸರ್ಚ್ ಮೂಲಕ ಪರಿಶೀಲಿಸಿದಾಗ  ಮೇ 2024 ರಂದು X ಮತ್ತು Instagram ನಲ್ಲಿ ಅದೇ ವೈರಲ್ ವಿಡಿಯೋವನ್ನು ಹಂಚಿಕೊಂಡ ಹಲವು ಪೋಸ್ಟ್‌ಗಳು ಕಂಡುಬಂದಿವೆ.

 

 

 

 

 

 

 

 

 

 

 

 

 

 

 

 

 

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, 22 ಏಪ್ರಿಲ್ , 2024 ರಂದು ಹೈದರಾಬಾದ್ ಫೆಸ್ಟಿವಲ್‌ ಎಂಬ ಯೂಟ್ಯೂಬ್ ಚಾನೆಲ್‌ನಿಂದ ಹಂಚಿಕೊಳ್ಳಲಾದ ವಿಡಿಯೋ ಲಭ್ಯವಾಗಿದೆ. ಈ ವಿಡಿಯೋಗೂ ವೈರಲ್ ವಿಡಿಯೋಗೂ ಸಾಮ್ಯತೆ ಇದ್ದು, ಹೊಂದಿಕೆಯಾಗುತ್ತದೆ  ‘ಹೈದರಾಬಾದ್ ಬಿಜೆಪಿ ಮಾಧವಿ ಲತಾ ಸಂದರ್ಶನ’ ಎಂದು ಶೀರ್ಷಿಕೆ ನೀಡಲಾಗಿದೆ.

ಈ ಸಂದರ್ಶನದ ಪೂರ್ಣ ಆವೃತ್ತಿಯನ್ನು ಅದೇ ಚಾನೆಲ್ ಏಪ್ರಿಲ್ 22, 2024 ರಂದು ಅಪ್‌ಲೋಡ್‌ ಮಾಡಿದೆ. ಅಲ್ಲಿ ಲತಾ ಅವರು ಸಿಎಎ ಮತ್ತು ಟ್ರಿಪಲ್ ತಲಾಖ್‌ನಂತಹ ಇತರ ವಿಷಯಗಳನ್ನು ಚರ್ಚಿಸಿದ್ದಾರೆ. ವೈರಲ್ ವಿಡಿಯೋದ ಭಾಗವು 1 ನಿಮಿಷ 21 ಸೆಕೆಂಡ್‌ ಅವದಿಯಲ್ಲಿ ಪ್ರಾರಂಭವಾಗುತ್ತದೆ, ಅಲ್ಲಿ ಸಂದರ್ಶಕರು ಮಾಧವಿ ಲತಾ ಅವರನ್ನು ಮುಸ್ಲಿಮರು ಭಯೋತ್ಪಾದಕರೇ ಎಂದು ಕೇಳುತ್ತಾರೆ. ಭಾರತೀಯ ಮುಸ್ಲಿಮರು ಭಯೋತ್ಪಾದಕರಾಗಲು ಸಾಧ್ಯವಿಲ್ಲ ಎಂದು ಹೇಳಿರುವ ಲತಾ ಅವರು, “ಆದರೆ ಬಡತನದಿಂದ ಬಳಲುತ್ತಿರುವ ಮಕ್ಕಳು, ಧರ್ಮದ ಹೆಸರಿನಲ್ಲಿ ಪ್ರಚೋದನೆಗೆ ಒಳಗಾಗುತ್ತಾರೆ, ಅವರ ಮನಸ್ಸು ಯಾವ ದಿಕ್ಕಿಗೆ ಹೋಗುತ್ತದೆ? ನಾನೇನು ಹೇಳಲಿ? ಜರ್ಜರಿತ ವ್ಯಕ್ತಿ ಬಡತನದಿಂದ ಏನು ಬೇಕಾದರೂ ಮಾಡಬಹುದು.” ಎಂದಿದ್ದಾರೆ.

ಮಾಧವಿ ಲತಾ ಈ ಹೇಳಿಕೆ ನೀಡಿದ ವಾರಗಳ ನಂತರ, ಮೇ 13 ರಂದು ಹೈದರಾಬಾದ್ ನಲ್ಲಿ ನಾಲ್ಕನೇ ಹಂತದ ಲೋಕಸಭೆ ಚುನಾವಣೆಯ ಮತದಾನ ನಡೆದಿದೆ. ಹಾಗಾಗ ಈ ವಿಡಿಯೋದಲ್ಲಿ ಮಾಧವಿ ಲತಾ ನೀಡಿರುವ ಹೇಳಿಕೆ ಚುನಾವಣೆಗೂ ಮುಂಚಿತವಾಗಿ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2024ರ ಲೋಕಸಭಾ ಚುನಾವಣೆ ಹೈದರಾಬಾದ್ ಲೋಕಸಬಾ ಕ್ಷೇತ್ರದಲ್ಲಿ ಮಾಧವಿ ಲತಾ ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ಸಮುದಾಯದೊಂದಿಗೆ ನಡೆದುಕೊಂಡ ರೀತಿ ಮುಸ್ಲಿಮರನ್ನು ಅವಮಾನಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ನಂತರ ಚುನಾವಣೆಯಲ್ಲಿ AIMIMನ ಅಸಾದುದ್ದೀನ್ ಓವೈಸಿ ವಿರುದ್ಧ ಪರಾಭವಗೊಂಡಿದ್ದರು. ಆದರೆ ಪೋಸ್ಟ್‌ನಲ್ಲಿ ಹೇಳಿರುವಂತೆ ಚುನಾವಣೆಯಲ್ಲಿ ಸೋತ ನಂತರ ಮುಸ್ಲಿಮರನ್ನು ಬೆಂಬಲಿಸಿ ಮಾತನಾಡಿದ್ದಾರೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಕಾನ್ಸ್ಟೆಬಲ್‌ಗೆ ಸೋನಿಯಾ ಗಾಂಧಿ ಕುಟುಂಬದೊಂದಿಗೆ ಸಂಬಂಧವಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights