‘ರಾಜ್ಯದಲ್ಲಿ ವರ್ಗಾವಣೆಯಿಂದ ಹಣ ಮಾಡದೆ ಇದ್ದ ಸರ್ಕಾರ ಅಂದ್ರೆ ನಮ್ಮ ಪಕ್ಷ ಮಾತ್ರ’
ರಾಜ್ಯದಲ್ಲಿ ವರ್ಗಾವಣೆಯಿಂದ ಹಣ ಮಾಡದೆ ಇದ್ದ ಸರ್ಕಾರ ಯಾವುದಾದ್ರು ಇದ್ರೆ ಅದು ಜೆಡಿಎಸ್ ಮಾತ್ರ. ವರ್ಗಾವಣೆಯಿಂದ ಹಣ ಮಾಡದೆ ಇರುವ ಕುಟುಂಬ ಅಂದ್ರೆ ಅದು ದೇವೇಗೌಡರ ಕುಟುಂಬ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಜೆಡಿಎಸ್ ಸರ್ಕಾರ ವರ್ಗಾವಣೆ ದಂದೆ ಮಾಡ್ತಿದ್ರು ಎಂಬ ವಿಶ್ವನಾಥ್ ಹೇಳಿಕೆಗೆ ಸಾ.ರಾ.ಮಹೇಶ್ ತಿರುಗೇಟು ಕೊಟ್ಟಿದ್ದಾರೆ. ವರ್ಗಾವಣೆ ದಂದೆ ಮಾಡ್ತಿರೋದು ಬಿಜೆಪಿ. ಜೆಡಿಎಸ್ ಸರ್ಕಾರ ಇದ್ದಾಗ ಎಲ್ಲವು ಪಾರದರ್ಶಕವಾಗಿ ನಡೆದಿದೆ. ವಿಶ್ವನಾಥ್ ಅವರು ಯಾಕಾಗಿ ಆರೋಪ ಮಾಡಿದ್ರೊ ಗೊತ್ತಿಲ್ಲ. ಅವರು ಸೋತಿದ್ದಾರೆ ಅವರ ಬಗ್ಗೆ ಮಾತನಾಡೋಲ್ಲ.
ಹುಣಸೂರಿನಲ್ಲಿ ನಮ್ಮ ಅಭ್ಯರ್ಥಿ ಪರ ನಾವು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇವೆ. ಜನರು ನಮಗೆ ಆರ್ಶಿವಾದ ಮಾಡಿದ್ದಾರೆ. ಯಾರು ಮಾರಾಟ ಆಗಿದ್ದಾರೆ ಅನ್ನೋದು ಹುಣಸೂರು ಜನರಿಗೆ ಗೊತ್ತಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನೆ ಮಾರಟ ಮಾಡಿದ್ದಾರೆ ಅನ್ನೋ ಆರೋಪಕ್ಕೆ ಸಾ.ರಾ.ಮಹೇಶ್ ತಿರುಗೇಟು ಕೊಟ್ಟಿದ್ದಾರೆ.