ಮಗು ಅಳು ನಿಲ್ಲಿಸದ ಹಿನ್ನೆಲೆ ಸಿಟ್ಟಾಗಿದ್ದ ತಾಯಿ ಮಾಡಿದ್ದು ಹೀಗೆ….!
ಹೀಗೆ ನೀರಿನಲ್ಲಿ ತೇಲಾಡ್ತಾಯಿರೋ ಮಗು ಹುಟ್ಟಿ ಆಗಿನ್ನು ಮೂರು ತಿಂಗಳು ಅಷ್ಟೇ. ಅನಾರೋಗ್ಯದಿಂದ ಬಳಲುತ್ತಿದ್ದ ಈ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಚಿಕಿತ್ಸೆ ನೀಡಿದ ಮಗುವಿಗೆ ಅದ್ಯಾವ ನೋವು ಇತ್ತೋ ಏನೋ ಗೊತ್ತಿಲ್ಲ. ಆಸ್ಪತ್ರೆಯಿಂದ ಬಂದ ಮಗು ಅಳುವನ್ನ ನಿಲ್ಲಿಸಲೇ ಇಲ್ಲ. ಆ ಮಗುವಿನ ಆಕ್ರಂದನದ ಹಿನ್ನೆಲೆ ತಾಯಿಗೇ ಅರ್ಥವಾಗೋದಿರಲಿ ಆ ಹಸುಗೂಸು ಕಂದಮ್ಮನ ಆಳುವೇ ಕಿರಿಕಿರಿಯಾಗಿತ್ತು. ಹೀಗಾಗಿ ಆ ಮಹಾತಾಯಿ ತನ್ನ ಕಂದಮ್ಮನ್ನನ್ನೇ ಕೊಂದು ಬಿಟ್ಟಿದ್ದಾಳೆ.
ಹೌದು.. ಪಾಪಿ ತಾಯಿಯೊಬ್ಬಳು ಮೂರು ತಿಂಗಳ ಹಸುಳೆಯನ್ನ ಭದ್ರಾ ನಾಲೆಗೆ ಎಸೆದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ. ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಪುಟ್ಟ ಕಂದನನ್ನ ನೀರಿಗೆ ಎಸೆದ ಕ್ರೂರಿ ಅಮ್ಮ. ಮೂರು ತಿಂಗಳ ತೇಜಸ್ ಮೃತದೇಹ ಬೆಟ್ಟತಾವರೆಕೆರೆ ಗ್ರಾಮದಲ್ಲಿ ದೊರೆತಿದೆ.
ಮಗುವಿಗೆ ಹುಷಾರಿಲ್ಲದ ಕಾರಣ ತರೀಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬಂದಿದ್ದ ಕಮ,ಲ ಹಳಿಯೂರಿನಿಂದ ಐದು ಕಿ.ಮೀ. ದೂರದ ಬೆಟ್ಟತಾವರೆಕೆರೆಗೆ ಮಗುವನ್ನ ಎತ್ತಿಕೊಂಡು ನಾಲ್ಕು ಕಿ.ಮೀ. ನಡೆದೇ ಬಂದಿದ್ದಳು. ಮಗು ಅಳು ನಿಲ್ಲಿಸದ ಹಿನ್ನೆಲೆ ಸಿಟ್ಟಾಗಿದ್ದ ತಾಯಿ, ಸಿಟ್ಟಿನಲ್ಲೇ ಮಗುವನ್ನ ನಾಲೆಗೆ ಎಸೆದಿದ್ದಾಳೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.