ನಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧಾರ..!
ರಸ್ತೆ ಅಪಘಾತದಲ್ಲಿ ಮೆದುಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ನಟ ಸಂಚಾರಿ ವಿಜಯ್ ಬದುಕೋ ಸಾಧ್ಯತೆ ತೀರಾ ಕಡಿಮೆಯಾಗಿದ್ದು ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಪೊಲೋ ಆಸ್ಪತ್ರೆ ವೈದ್ಯ ಅರುಣ್ ನಾಯಕ್, ” ವಿಜಯ್ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಕೋಮಾದಲ್ಲಿದ್ದಾರೆ. ಮೆದುಳಿಗೆ ಗಂಭೀರವಾಗಿ ಗಾಯವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಉಸಿರಾಡುತ್ತಿಲ್ಲ. ವೆಂಟಿಲೇಟರ್ ಸಹಾಯದಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಬ್ರೇನ್ ಡೆಡ್ ಆದಮೇಲೆ ಹಾರ್ಟ್ ಹೊಡೆದುಕೊಳ್ಳುತ್ತದೆ. ಅದಕ್ಕೆ ನಾವು ವೆಂಟಿಲೇಟರ್ ಸಹಾಯ ಬೇಕಾಗುತ್ತದೆ. ಒಂದು ವೇಳೆ ವೆಂಟಿಲೇಟರ್ ತೆಗೆದರೆ ಅವರು ಬದುಕುಳಿಯುವುದಿಲ್ಲ. ಹೀಗಾಗಿ ಅವರ ಸಂಬಂಧಿಕರು ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಹೇಳಿದ್ದಾರೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ವಿಜಯ್ ಸಹೋದರ ಸಿದ್ದೇಶ್, “ಈ ಸ್ಥಿತಿ ಬರುತ್ತೆ ಅಂತ ನಾವು ಅಂದುಕೊಂಡಿರಲಿಲ್ಲ. ಅವನಿಲ್ಲ ಅನ್ನೋದನ್ನ ನನಗೆ ಕಲ್ಪನೆ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಹೋದರನನ್ನು ನೆನೆದು ತುಂಬಾ ಕಣ್ಣೀರಿಟ್ಟಿದ್ದಾರೆ. ಮೆದುಳಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಶಸ್ತ್ರಚಿಕಿತ್ಸೆ ಬಳಿಕವೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇನ್ನೂ ಕೆಲ ಗಂಟೆ ಬಿಟ್ಟರೆ ನಾವು ಅಂಗಾಂಗ ದಾನ ಕೂಡ ಮಾಡಲು ಆಗವುದಿಲ್ಲ. ಹೀಗಾಗಿ ನಾವು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇವೆ” ಎಂದು ಕಣ್ಣೀರು ಹಾಕಿದ್ದಾರೆ.
ಇನ್ನೂ ಸಂಚಾರಿ ವಿಜಯ್ ಸ್ಥಿತಿ ಕಂಡು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.