ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು…!
ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ ಸಮೀಪದ ಕೆಂಚಿನಕಟ್ಟೆ ಕೆರೆಯಲ್ಲಿ ನಡೆದಿದೆ.
ಜೀವಿತ್ (14), ಮುರುಳಿ ಕಾರ್ತಿಕ್ (15), ಚಿರಾಗ್ (16) ಮೃತ ಬಾಲಕರು. ಮುರುಳಿ ಕಾರ್ತಿಕ್, ಜೀವಿತ್ ಬಿಜಿಎಸ್ ಶಾಲೆ ಯ 8 ನೇ ತರಗತಿ ವಿದ್ಯಾರ್ಥಿಗಳು, ಚಿರಾಗ್ ಸಾಯಿ ಏಂಜಲ್ ಶಾಲೆಯ 10 ನೇ ವಿದ್ಯಾರ್ಥಿ ಮೃತ ದೇಹ ಪತ್ತೆಯಾಗಿದೆ.
ನಿನ್ನೆ ಸಂಜೆ ಆಯುಧ ಪೂಜೆ ಮುಗಿಸಿಕೊಂಡು ಈಜಲು ಬಂದ ವಿದ್ಯಾರ್ಥಿಗಳು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿಗಳು.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಸ್ಥಳಗಾಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.