ಮಂಡ್ಯದಲ್ಲಿ 50 ಪ್ರವಾಸಿ ತಾಣ ಗುರುತು : ಅಭಿವೃದ್ಧಿಗೆ ನಿರ್ಧಾರ – ಸಿ.ಟಿ.ರವಿ
ಮಂಡ್ಯ ಜಿಲ್ಲೆಯಲ್ಲಿ 50 ಪ್ರವಾಸಿ ತಾಣಗಳನ್ನು ಗುರುತಿಸಿದ್ದೇವೆ. ಗಗನಚುಕ್ಕಿ ಜಲಪಾತ, ಕೊಕ್ಕರೆ ಬೆಳ್ಳೂರು, ಶ್ರೀರಂಗಪಟ್ಟಣದ ಅನೇಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಪ್ರವಾಸಿ ಕೇಂದ್ರಗಳ ಪಾರಂಪರಿಕ ತಾಣ ಮಾಡಲಾಗುತ್ತದೆ. ವೀಕೆಂಡ್ ನಲ್ಲಿ ಮೈಸೂರು, ಮಡಿಕೇರಿ ಗೆ ಬೆಂಗಳೂರು ಕಡೆಯಿಂದ ಹೆಚ್ಚಿನ ಪ್ರವಾಸಿಗರು ಬರ್ತಾರೆ. ಶ್ರೀರಂಗಪಟ್ಟಣ ಪ್ರವಾಸಿ ತಾಣ ಅಭಿವೃದ್ಧಿ ಮಾಡಿದರೆ ಸರ್ಕಾರಕ್ಕೆ ಪ್ರವಾಸೋದ್ಯಮ ಇಲಾಖೆಗೆ ಲಾಭವಾಗಲಿದೆ. ಜನರಿಗೆ ಉದ್ಯೋಗ ಸಹ ಸೃಷ್ಟಿಯಾಗಲಿದೆ.
ಮಲೇಷ್ಯಾ, ಸಿಂಗಾಪುರ್ ನಲ್ಲಿ ಕೃತಕ ಪ್ರವಾಸಿ ತಾಣಗಳಿವೆ. ಆದರೆ ನಮ್ಮಲ್ಲಿ ಎಲ್ಲವೂ ಇದ. ಮಂಡ್ಯ ಜಿಲ್ಲೆಯ 66 ಪ್ರವಾಸಿ ತಾಣಗಳ ಅಭಿವೃದ್ಧಿ ಗೆ 88 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿ ಗೆ ಖಾಸಗಿ ಹೂಡಿಕೆ ಸಹ ಮಾಡಲಾಗುವುದು. ಪ್ರವಾಸಿ ತಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಡಲು ಚಿಂತನೆ ಮಾಡಲಾಗಿದೆ ಎಂದರು.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಡ ಎಂಬ ವಿಚಾರಕ್ಕೆ ಮಾತನಾಡಿದ ಅವರು ಸಾಂಸ್ಕೃತಿಕ ಧ್ವಜ ಹಿಂದೆಯೂ ಇತ್ತು. ಈಗಲೂ ಇದೆ ಮುಂದೆಯೂ ಇರುತ್ತದೆ. 1965ರಲ್ಲಿ ಪ್ರಸ್ತುತ ರಾಜ್ಯದ ಧ್ವಜ ಪಕ್ಷವೊಂದರ ಬಾವುಟ ಆಗಿತ್ತು.ಆದರೆ ಜನ ಧ್ವಜವನ್ನು ಸ್ವೀಕಾರ ಮಾಡಿದ್ದಾರೆ. ದೇಶಕ್ಕೆ ಒಂದೇ ಧ್ವಜ ಅಂತ ಅಂಬೇಡ್ಕರ್ ಹೇಳಿದ್ರು.ನಾನು ಅದನ್ನ ಉಲ್ಲೇಖ ಮಾಡಿ ಹೇಳಿದೆ ಅಷ್ಟೆ. ನಾನು ಅಂಬೇಡ್ಕರ್ ಅಥವಾ ಸಂವಿಧಾನದ ವಿರೋಧಿ ಅಲ್ಲ. ಪ್ರವಾಹ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗದ ವಿಚಾರ.
NDRF ತಂಡ ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದೆ. ಶೀಘ್ರವೇ ಪರಿಹಾರ ಬಿಡುಗಡೆ ಆಗಲಿದೆ. ಬಳಿಕ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರಕ್ಕೆ ಒತ್ತಡ ಹಾಕಲಿದೆ. ನಮಗೆ ರಾಜ್ಯದ ಹಿತ ಮೊದಲು ಪಕ್ಷ, ರಾಜಕಾರಣ ನಂತರ. ಮತ್ತೆರಡು ಡಿಸಿಎಂ ರಚಿಸುವ ವಿಚಾರವಿದೆ. ಊಹಾಪೋಹಗಳಿಗೆ ಉತ್ತರ ಕೊಡೋಕೆ ಹೋಗಲ್ಲ ಎಂದರು.