ಅಗ್ನಿ ಅವಘಡದಿಂದ ಹೊತ್ತಿಉರಿದ ಮೊಬೈಲ್ ಶೋರೂಮ್ : ವಿಡಿಯೋ ನೋಡಿ..

ಅಗ್ನಿ ಅವಘಡದಿಂದ ಮೊಬೈಲ್ ಶೋರೂಮ್ ಹೊತ್ತಿಉರಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ನಡೆದಿದೆ.

ಹೌದು… ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಅಕ್ಷಯ ಪಾರ್ಕ್‌ನ ಛಬ್ಬಿ ಕಾರ್ನರ್ ಕಟ್ಟಡವೊಂದು ಧಗಧಗನೆ ಉರಿದು ಮೊನೈಲ್ ಶೋರೂಮ್ ಸುಟ್ಟುಕರಕಲಾಗಿದೆ. ಅಷ್ಟು ಮಾತ್ರವಲ್ಲದೇ ಅಕ್ಕಪಕ್ಕದ ಕಟ್ಟಡಗಳಿಗೂ ಬೆಂಕಿ ಆವರಿಸಿ ಭಾರೀ ನಷ್ಟ ಉಂಟು ಮಾಡಿದೆ.

ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ, ಉದ್ಯಮಿ ಸುರೇಶ ಶೇಜವಾಡಕರ್ ಮಾಲೀಕತ್ವದ ಕಟ್ಟಡ ಇದಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights