ಏಕಾಏಕಿ ಹೊತ್ತಿ ಉರಿದ ಮಾರುತಿ ಸಿಫ್ಟ್ ಕಾರು…!
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಾರುತಿ ಸಿಫ್ಟ್ ಕಾರ್ ವೊಂದು ಏಕಾಏಕಿ ಹೊತ್ತಿ ಉರಿದ ಘನಟೆ ರಾಮನಗರದ ಶಾಂತಿನಿಕೇತನ ಕಾಲೇಜು ಮುಂಭಾಗ ನಡೆದಿದೆ.
ಹೊಸಕೊಟೆ ಮೂಲದ ಮಂಜುನಾಥ್ ಎಂಬುವವರಿಗೆ ಸೇರಿದ ಕಾರ್ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದೆ. ಮಂಜುನಾಥ್ ಹೊಸಕೋಟೆಯಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರಷ್ಟವಶಾತ್ ಕಾರಿನಲ್ಲಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದ್ದು, ರಾಮನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.