ಕಣ್ಣೀರು ಹಾಕಿದ್ದಕ್ಕೆ ವ್ಯಂಗ್ಯ : ಸದಾನಂದಗೌಡರಿಗೆ ಹೆಚ್.ಡಿ.ಕುಮಾರಸ್ವಾಮಿ ಖಡಕ್ ತಿರುಗೇಟು

ಉಪಚುನಾವಣೆಯ ಪ್ರಚಾರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ವ್ಯಂಗ್ಯವಾಡಿದ್ದ ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಖಡಕ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಡವರನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ಬಿಜೆಪಿಯವರ ಸಂಸ್ಕೃತಿಯೇ ಬೇರೆ.ಸದಾನಂದಗೌಡರು ಸತ್ತವರ ಮನೆಯಲ್ಲೂ ನಗುತ್ತಾರೆ. ಸತ್ತಾವರ ಮನೆಗೆ ಡಿವಿಎಸ್ ಕರೆದುಕೊಂಡು ಹೋಗಬೇಡಿ, ಸತ್ತವರ ಮನೆಗೆ ಹೋಗಿ ನಗುತ್ತಾರೆ ಎಂದು ಹರಿಹಾಯ್ದರು.

ಇನ್ನು ವಿ. ಸೋಮಣ್ಣ ವಿರುದ್ಧ ಕಿಡಿಕಾರಿದ ಹೆಚ್ಡಿಕೆ, ವಿ. ಸೋಮಣ್ಣ ಬೆಂಗಳೂರಿನ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದರು. ಅಂಥವರು ದೇವೇಗೌಡರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ದೇವೇಗೌಡರ ಮುಂದೆ ವಿ.ಸೋಮಣ್ಣ ಬಚ್ಚಾ, ದೇವೇಗೌಡರು 18 ಚುನಾವಣೆಗಳಲ್ಲಿ 14 ಗೆದ್ದಿದ್ದಾರೆ. 4 ರಲ್ಲಿ ಸೋತಿದ್ದಾರೆ. ಅವರ ಬಗ್ಗೆ ಸೋಮಣ್ಣ ಮಾತನಾಡುವುದ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights