ಕಾವೇರಿ ಕೂಗು ಬೈಕ್ ರ್ಯಾಲಿ : ಜಾಥಾದಲ್ಲಿ ಪಾಲ್ಗೊಂಡ ನೂರಾರು ಅನುಯಾಯಿಗಳು
ಕಾವೇರಿ ನದಿ ಉಳಿವಿಗಾಗಿ ಈಶಾ ಫೌಂಡೇಶನ್ ವತಿಯಿಂದ ಮೈಸೂರಿನಲ್ಲಿ ಕಾವೇರಿ ಕೂಗು ಬೈಕ್ ರ್ಯಾಲಿ ಮಾಡಲಾಯ್ತು.
ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ಜಾಥಕ್ಕೆ ಚಾಲನೆ ನೀಡಲಾಯ್ತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನೀಲಿ ನಿಶಾನೆ ತೋರಿಸಿದ ನಂತರ ಬೈಕ್ ರ್ಯಾಲಿ ಆರಂಭಿಸಲಾಯ್ತು. ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಆರಂಭವಾಗಿರುವ ಅಭಿಯಾನ, ಸದ್ಗುರು ಜಗ್ಗಿ ವಾಸುದೇವ ನೇತೃತ್ವದಲ್ಲಿ ಅರಮನೆ-ಗನ್ಹೌಸ್ ವೃತ್ತ- ರಾಮಸ್ವಾಮಿ ವೃತ್ತ- ರೈಲ್ವೆ ನಿಲ್ದಾಣ- ದೊಡ್ಡ ಗಡಿಯಾರ ವೃತ್ತ ಸೇರಿದಂತೆ 5 ಕಿಲೋಮೀಟರ್ ವರೆಗೆ ಸಾಗಿ ಜಾಥಾ ಪೂರ್ಣಗೊಳಿಸಲಾಯ್ತು.
ನದಿ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಸದ್ಗುರು ಕರೆಗೆ ಓಗೊಟ್ಟು ಬೈಕ್ ಜಾಥಾದಲ್ಲಿ ಪಾಲ್ಗೊಂಡ ನೂರಾರು ಅನುಯಾಯಿಗಳು ಪಾಲ್ಗೊಂಡಿದ್ದರು.