‘ಸಬ್‌ಕಾ ಸಾಥ್, ಸಬ್ ಕಾ ವಿಕಾಸ್’ಎಲ್ಲಿದೆ? ಬಿಜೆಪಿ ವಿರುದ್ಧ ಸೋನಿಯಾ ಗಾಂಧಿ ವಾಗ್ದಾಳಿ

ಜನರು ಹೊಡೆದಾಡುವಂತೆ ಮಾಡುವುದು ಬಿಜೆಪಿ ಕಾರ್ಯಸೂಚಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಬ್ಯಾಂಕ್‌ನಲ್ಲಾಗಲಿ ಅಥವಾ ಮನೆಯಲ್ಲಾಗಲಿ ಜನತೆಯ ಹಣಕ್ಕೆ ಸುರಕ್ಷ್ಷತೆ ಇಲ್ಲವಾಗಿದೆ. ಜನರು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಹಾಗಿಲ್ಲ. ಇದು ಮೋದಿ-ಶಾ ಆಡಳಿತ ವೈಖರಿ. ಪೌರತ್ವ ತಿದ್ದುಪಡಿ ಮಸೂದೆ ಜಾರಿಗೊಳಿಸಿರುವ ಪ್ರಧಾನಿ ಮೋದಿ ಅವರ ‘ಸಬ್‌ಕಾ ಸಾಥ್, ಸಬ್ ಕಾ ವಿಕಾಸ್’ಎಲ್ಲಿಗೆ ಹೋಗಿದೆ?ಎಂದು ಸೋನಿಯಾ ಗಾಂಧಿ ಕೇಂದ್ರ ಸರಕಾರಕ್ಕೆ ಪ್ರಶ್ನಿಸಿದ್ದಾರೆ.

” ಪೌರತ್ವ ಕಾಯ್ದೆ ಭಾರತವನ್ನು ನಾಶ ಮಾಡಲಿದೆ. ಸಂಸತ್ತು ಹಾಗೂ ಸಂಸ್ಥೆಗಳ ಬಗ್ಗೆ ಮೋದಿ ಹಾಗೂ ಶಾಗೆ ಚಿಂತೆಯಿಲ್ಲ. ನೈಜ ವಿಚಾರವನ್ನು ಮುಚ್ಚಿಟ್ಟು ಜನರನ್ನು ಹೊಡೆದಾಡುವಂತೆ ಮಾಡುವುದು ಅವರ ನಿಜವಾದ ಕಾರ್ಯಸೂಚಿ. ಬಿಜೆಪಿ ಪ್ರತಿದಿನವೂ ಸಂವಿಧಾನವನ್ನು ಉಲ್ಲಂಘಿಸುತ್ತದೆ. ಮತ್ತೊಂದೆಡೆ ಸಂವಿಧಾನ ದಿನವನ್ನು ಆಚರಿಸುತ್ತದೆ. ದೇಶ ಹಾಗೂ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸದಾಕಾಲ ನಿರ್ವಹಿಸುತ್ತದೆ” ಎಂದು ಭಾರತ್ ಬಚಾವೋ ರ‍್ಯಾಲಿಯಲ್ಲಿ ಸೋನಿಯಾ ಭರವಸೆ ನೀಡಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights