ಕೂಡಲೇ ರಾಜ್ಯ ಸರ್ಕಾರ ಈ ಎರಡೂ ಆದೇಶ ಹಿಂಪಡೆಯಬೇಕು- ಬಸವರಾಜ ರಾಯರೆಡ್ಡಿ ಆಗ್ರಹ
ಕೊಪ್ಪಳದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಯೋಜನೆ- ಸಂವಿಧಾನದ ಮೇಲೆ ನಂಬಿಕೆ ಇಲ್ಲ’ ಎಂದಿದ್ದಾರೆ.
ಕೇವಲ ಜನರ ಭಾವನೆಗಳ ಜೊತೆ ಆಟ ಆಡುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹೈದ್ರಾಬಾದ್ ಕರ್ನಾಟಕವನ್ನು, ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲು ಮಾಡಿದ್ದಾರೆ. ಹೈ- ಕ ವನ್ನು ಕಲ್ಯಾಣ ಕರ್ನಾಟಕ ಅಂತಾ ಮರು ನೇಮಕ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ.
ಈ ಹೆಸರು ಬದಲಿಸುವ ಅಧಿಕಾರ ಸಂಸತ್ತಿಗೆ ಇದೆ. ಒಂದೊಮ್ಮೆ ಸರ್ಕಾರದ ಆದೇಶವನ್ನು ಯಾರಾದರೂ ಚಾಲೆಂಜ್ ಮಾಡಿದ್ರೆ 371 ಜೆ ಮೀಸಲಾತಿ ರದ್ದಾಗಲಿದೆ. ಇದು ರಾಜ್ಯ ಸರ್ಕಾರದ ಅವಿವೇಕತನದ ಪರಮಾವಧಿ. ಕೂಡಲೇ ಸರ್ಕಾರ ಈ ಎರಡೂ ಆದೇಶ ಹಿಂಪಡೆಯಬೇಕು ಎಂದು ರಾಯರೆಡ್ಡಿ ಆಗ್ರಹಿಸಿದ್ದಾರೆ.