FACT CHECK | ಮೋದಿಯನ್ನು ಸೋಲಿಸಲು ಲಕ್ಷಾಂತರ ಮುಸ್ಲಿಮರು ದುಬೈನಿಂದ ಬಂದದ್ದು ನಿಜವೇ ?
ನರೇಂದ್ರ ಮೋದಿ ಮತ್ತು ಬಿಜೆಪಿ ಸೋಲಿಸಲು ದುಬೈನಿಂದ ಮುಸ್ಲಿಮರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅವರಿಗೆ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಕೇರಳದ ಅನಿವಾಸಿ ಮುಸ್ಲಿಮರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತಕ್ಕೆ ಬಂದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಎಟಿಎಂ ಸರ್ಕಾರ್ ಎಂಬ ಫೆಸ್ಬುಕ್ ಪೇಜ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗೆಯೇ ಇನ್ಸ್ಟಾಗ್ರಾಮ್ನಲ್ಲಿಯೂ ಹಲವರು ಇದೇ ವಿಡಿಯೋವನ್ನು ಹಂಚಿಕೊಂಡು ಬಿಜೆಪಿಯನ್ನು ಸೋಲಿಸಲು ದುಬೈನಿಂದ ಲಕ್ಷಾಂತರ ಮುಸ್ಲಿಮರು ಆಗಮಿಸಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ.
View this post on Instagram
ಹಾಗಿದ್ದರೆ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ದುಬೈನಿಂದ ಬಂದಿದ್ದಾರೆ ಎನ್ನಲಾದ ವಿಡಿಯೋದಲ್ಲಿ ಮಾಡಿರುವ ಪ್ರತಿಪಾಧನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಲು ವಿಡಿಯೋದ ಕೀ ಪ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, 22 ಏಪ್ರಿಲ್ 2024ರಂದು ಆನ್ ಮನೋರಮ ಸುದ್ದಿ ತಾಣದಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ.
ಆನ್ ಮನೋರಮಾ ವರದಿಯ ಪ್ರಕಾರ ಕಳೆದ ವಾರ ತೀವ್ರ ಪ್ರವಾಹದಿಂದಾಗಿ UAE ಮತ್ತು ಇತರ ಗಲ್ಫ್ ರಾಷ್ಟ್ರಗಳಿಂದ ಅನೇಕ ವಿಮಾನಗಳು ರದ್ದುಗೊಂಡಿದ್ದವು. ಇದ್ದ ಕೆಲವೇ ಕೆಲವು ವಿಮಾನಗಳ ಬೆಲೆ ದುಬಾರಿಯಾಗಿತ್ತು. ಹಾಗಾಗಿ ಅಲ್ಲಿ ನೆಲೆಸಿರುವ ಅನಿವಾಸಿ ಕೇರಳಿಗರು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಮೂರು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ. “ಅನಿವಾಸಿ ಮತದಾರರು ಹೆಚ್ಚಾಗಿ ಉತ್ತರ ಕೇರಳಕ್ಕೆ ಆಗಮಿಸುತ್ತಾರೆ. ಯುಎಇ ಮತ್ತು ಸೌದಿ ಅರೇಬಿಯಾದಿಂದ ತಲಾ 10,000 ವಲಸಿಗ ಮತದಾರರನ್ನು ಮನೆಗೆ ಕರೆತರುವ ಗುರಿಯನ್ನು ಸಂಸ್ಥೆ ಹೊಂದಿದೆ” ಎಂದು ಗ್ಲೋಬಲ್ ಕೆಎಂಸಿಸಿ ಅಧ್ಯಕ್ಷ ಇಪಿ ಉಬೈದುಲ್ಲಾ ಹೇಳಿದ್ದಾರೆ ಎಂದು ಆನ್ಮನೋರಮ ಸುದ್ಧಿ ಮಾಧ್ಯಮ ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದ ಶುಕ್ರವಾರದಿಂದ ಜಿಸಿಸಿ ದೇಶಗಳಿಂದ ಕೇರಳಕ್ಕೆ ಬಹುತೇಕ ವಿಮಾನ ಸೇವೆಗಳನ್ನು ಮತದಾರರು ಸಂಪೂರ್ಣವಾಗಿ ಬುಕ್ ಮಾಡಿದ್ದಾರೆ. ಈ ಮಧ್ಯೆ, ರಾಜಕೀಯ ಪಕ್ಷಗಳೊಂದಿಗೆ ಸಂಯೋಜಿತವಾಗಿರುವ ವಿವಿಧ ವಲಸಿಗ ಸಂಸ್ಥೆಗಳು ವಿದೇಶೀ ಮತದಾರರಿಗೆ ಕೈಗೆಟುಕುವ ದರದಲ್ಲಿ ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಲು ಟ್ರಾವೆಲ್ ಏಜೆನ್ಸಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿವೆ. ಟಿಕೆಟ್ಗಳು ಸರಾಸರಿ 8500 ರೂ.ಗೆ ಮಾರಾಟವಾಗಿವೆ.
ಕೆಎಂಸಿಸಿ ಏಪ್ರಿಲ್ 7 ರಂದು ಜೆಡ್ಡಾದಿಂದ ಕೇರಳಕ್ಕೆ 190 ಮತದಾರರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ. ಕುತೂಹಲಕಾರಿಯಾಗಿ, ಕೋಝಿಕ್ಕೋಡ್ ಜಿಲ್ಲೆಯೊಂದರಲ್ಲೇ 35,793 ವಿದೇಶಿ ಮತದಾರರಿದ್ದಾರೆ. ಅಂದಾಜಿನ ಪ್ರಕಾರ, ಅವರಲ್ಲಿ 14,827 ವಡಕರ ಕ್ಷೇತ್ರದಲ್ಲಿ ನೋಂದಾಯಿತ ಮತದಾರರು, 17,424 ಕೋಝಿಕ್ಕೋಡ್ ಮತ್ತು 3542 ವಯನಾಡ್ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ. ಏತನ್ಮಧ್ಯೆ, ಪಾಲಕ್ಕಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಟ್ಟಾಂಬಿಯಲ್ಲಿ 10,000 ಮತ್ತು ಮನ್ನಾರ್ಕಾಡ್ ಪ್ರದೇಶಗಳಲ್ಲಿ 8800 ವಲಸಿಗ ಮತದಾರರಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ವಿದೇಶಿ ಮತದಾರರಿದ್ದಾರೆ. ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ 7035 ಅನಿವಾಸಿ ಮತದಾರರು ನೋಂದಣಿಯಾಗಿದ್ದಾರೆ.
ಇಲ್ಲಿ ಸಾವಿರಾರು ಮತದಾರರು ಭಾರತದಿಂದ ಹೊರಗಿದ್ದಾರೆ, ಆದರೆ ಅವರೆಲ್ಲರನ್ನು ವಿದೇಶದಿಂದ ಕರೆಸಿಕೊಳ್ಳಲು ಸಾಧ್ಯವಿಲ್ಲ. ಕೇವಲ ಆರ್ಥಿಕವಾಗಿ ಅನುಕೂಲ ಇರುವವರು ಮಾತ್ರ ವಿದೇಶದಿಂದ ಬಂದು ಮತ ಚಲಾಯಿಸುವವರಿದ್ದಾರೆ. ಇನ್ನೂ ಸಾವಿರಾರು ಮತದಾರರು ಲೋಕಸಭಾ ಚುನಾವಣೆಗೆ ಭಾಗವಹಿಸದೇ ಇರುವ ಸಾಧ್ಯತೆ ಇದೆ. ಆದ್ದರಿಂದ ಸಧ್ಯ ಹಂಚಿಕೊಂಡಿರುವ ವಿಡಿಯೋ ಪ್ರತಿಪಾದನೆ ಸುಳ್ಳು.
ವಾಸ್ತವವಾಗಿ ಕೇರಳದ ಮತದಾರರು ಪ್ರಭುದ್ದರು, ಇಲ್ಲಿ ಆಮಿಷಗಳಿಗೆ ತಮ್ಮ ಮತಗಳನ್ನು ಮಾರಿಕೊಳ್ಳುವುದಿಲ್ಲ, ಅಲ್ಲದೆ ಮತದಾನ ಎಂಬುದು ತಮ್ಮ ಕರ್ತವ್ಯವೆಂದು ನಂಬಿ ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಂ ದ್ವೇಷವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಪ್ರತಿನಿತ್ಯ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದಂತೆ ಹತ್ತಾರು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಹಿಂದುಗಳಲ್ಲಿ ಮುಸ್ಲಿಂ ಸಮುದಾಯದ ಕುರಿತು ಭಯ ಮತ್ತು ದ್ವೇಷವನ್ನು ಸೃಷ್ಟಿಸಲಾಗುತ್ತಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮುನ್ನ ಪರಿಶೀಲಿಸಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 230 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿದೆಯೇ?