ಗ್ರಾಮಸ್ಥರನ್ನು ಕಾಪಾಡಿದ ವಿದ್ಯುತ್ ತಂತಿ : ಕಾಡಂಚಿನತ್ತ ಬಂದಿದ್ದ ಚಿರತೆ ಸಾವು…
ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಡಿ.ಕೋಟೆ ತಾಲ್ಲೂಕು ಜಿಯಾರ ಗ್ರಾಮದ ಬಳಿ ನಡೆದಿದೆ.
ಕುಡಿಯುವ ನೀರಿನ ಪಂಪ್ಸೆಟ್ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿಗೆ ಚಿರತೆಯೊಂದು ಸಿಕ್ಕಿಕೊಂಡು ಸಾವನ್ನಪ್ಪಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಿಂದ ಆಹಾರ ಅರಸಿ ಕಾಡಂಚಿನತ್ತ ಬಂದಿದ್ದ ಬಂದ ಚಿರತೆ ವಿದ್ಯುತ್ ತಂತಿ ಬಾಯಿಯಲ್ಲಿ ಕೊಚ್ಚಿಕೊಂಡ ಸ್ಥಿತಿಯಲ್ಲಿಯೇ ಜೋತಾಡುತ್ತಾ ಹಸುನೀಗಿದೆ.
ಈ ದೃಶ್ಯ ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಚಿರತೆಯಿಂದ ಆಪತ್ತು ತಪ್ಪಿದೆ ಅನ್ನೋ ಆತಂಕದಿಂದಲೂ ಕೆಲವರು ನಿರಾಳರಾಗಿದ್ದಾರೆ.