ಟ್ವಿಟ್ ಮಾಡೋ ಬದಲು, ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ – ಕಾಂಗ್ರೆಸ್ಸಿಗರಿಗೆ ಕಿವಿ ಮಾತು ಹೇಳಿದ ಸಿ.ಟಿ.ರವಿ
ಕಾಂಗ್ರೆಸ್ಸಿಗರೇ ನೀವೆಲ್ಲಾ ತಾಕತ್ತಿರೋ ಜನರೇ ಇದ್ದೀರಾ…. ನಿಮ್ಮ ಆಸ್ತಿ ಕೂಡ ಚಿಕ್ಕ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದು ಸದುಪಯೋಗವಾಗ ಆಗಬೇಕಂದ್ರೆ, ಪುಣ್ಯದ ಕೆಲಸ ಮಾಡ್ಬೇಕು. ಟ್ವಿಟ್ ಮಾಡೋ ಬದಲು, 5-10-20 ಗ್ರಾಮಗಳನ್ನ ದತ್ತು ಪಡೆದುಕೊಳ್ಳಿ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಕಾಂಗ್ರೆಸ್ಸಿಗರಿಗೆ ಕಿವಿ ಮಾತು ಹೇಳಿದ್ದಾರೆ. ಚಿಕ್ಕಗಳೂರಿನಲ್ಲಿ ಮಾತನಾಡಿದ ಅವ್ರು, ಕಾಂಗ್ರೆಸ್ಸಿಗರೇ ನಿಮ್ಮದು ರಾಜಕೀಯ ಅದನ್ನ ಬಿಟ್ಟು.
ಕಷ್ಟದಲ್ಲಿರುವವರ ನೆರವಿಗೆ ಬನ್ನಿ. ಹೆಲ್ದಿ ಕಾಂಪಿಟೇಶನ್ ಬೆಳೆಯುತ್ತೆ. ನೀವು 10 ಗ್ರಾಮ ಪಡೆದ್ರೆ, ಬಿಜೆಪಿಯವ್ರು 20 ಗ್ರಾಂ ಪಡೆಯುತ್ತಾರೆ. ನಾವೇನಾದ್ರು ಮಾಡ್ಬೇಕೆಂದು ಆ ಜೆಡಿಎಸ್ನವರು 8-10 ಗ್ರಾಮ ಪಡೆಯುತ್ತಾರೆ. ಆಗ ಕಾಂಪಿಟೇಶನ್ ಬೆಳೆಯುತ್ತೆ. ನಮ್ಮೆಲ್ಲರ ಸಹನೆ, ಸಿಟ್ಟನ್ನ ಕನ್ಟ್ರಷ್ಷನ್ ಆಗಿ ನಿಮಾರ್ಣ ಮಾಡೋಣ.
ಕ್ವಷನ್ ಮಾಡೋ ಬದಲು ಆ ರೀತಿ ಹೆಲ್ತಿ ಕಾಂಪಿಟೇಶನ್ ಮಾಡಿ ಎಂದು ಮನವಿ ಮಾಡ್ಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಮಾಡ್ಬೇಕೆಂಬುದು ಅಲ್ಲಿನ ಶಾಸಕರ ಒತ್ತಡ. ಅದಿನ್ನು ಸಂಪುಟದ ಮುಂದೆ ಬಂದಿಲ್ಲ. ಆ ಸಂದರ್ಭ ಬಂದಾಗ ಅದರ ಸಾಧಕ-ಬಾಧಕ ಚರ್ಚಿಸೋಣ. ಸಿಎಂ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದ್ರು.