ನಾನು ನಿನ್ನನ್ನು ಪ್ರೀತಿಸಲ್ಲ ಎಂದಿದ್ದಕ್ಕೆ ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ….
ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಮನೆಗೆ ಬಂದ ಭಗ್ನ ಪ್ರೇಮಿಯು ಯುವತಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಶ್ವೇತಾಳ ಮುಖಕ್ಕೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಯುವತಿ ಸಾಗರ ಪಟ್ಟಣದ ಅಣಲೆಕೊಪ್ಪದ ನಿವಾಸಿ ಶ್ವೇತಾ. ಸಾಗರ ತಾಲೂಕಿನ ಆನಂದಪುರದ ರಾಕೇಶ್ (೨೨ ವರ್ಷ)ಯುವಕ ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದನು.
ಪ್ರೀತಿಸಲು ನಿರಾಕರಿಸಿದ್ದ ಯುವತಿ, ರಾಖಿ ಕಟ್ಟುವುದಕ್ಕೆ ಮುಂದಾಗಿದ್ದಳು. ಇಂದು ಮದ್ಯಾಹ್ನ ಯುವತಿ ಮನೆಗೆ ತೆರಳಿ, ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಯುವತಿಗೆ ಚಾಕುವಿನಿಂದ ಇರಿದಿರುವ ಯುವಕ ಪರಾರಿಯಾಗಿದ್ದಾನೆ.
ಗಾಯಾಳು ಯುವತಿಯನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.