ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ : ಚಾಮುಂಡಿಬೆಟ್ಟದಲ್ಲಿ ವಿ.ಸೋಮಣ್ಣ ಜೊತೆ ಜಿಟಿಡಿ ಪೂಜೆ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನಲೆಯಲ್ಲಿ ಮೋದಿಗಾಗಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿ.ಸೋಮಣ್ಣ ಜೊತೆ ಜಿಟಿಡಿ ಪೂಜೆ ಸಲ್ಲಿಸಿದ್ದಾರೆ.

ಮೋದಿಗೆ ಶುಭಹಾರೈಸಿದ ನಾಯಕರು‌ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ವಿ.ಸೋಮಣ್ಣ, ಜಿ.ಟಿ.ದೇವೇಗೌಡ, ಪ್ರತಾಪ್‌ಸಿಂಹ, ಎಲ್.ನಾಗೇಂದ್ರರಿಂದ ಚಾಮುಂಡಿಗೆ ಪೂಜೆ ಕಾರ್ಯ ನೆರೆವೇರಿತು. ನರೇಂದ್ರ ಮೋದಿ, ಯಡಿಯೂರಪ್ಪ, ಹಾಗೂ ಬಿಜೆಪಿ ಹೆಸರಿನಲ್ಲಿ ಅರ್ಚನೆ ಮಾಡಲಾಯಿತು.

ಬೆಳ್ಳಂ ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ರೌಂಡ್ ಹಾಕಿದ ಸಚಿವ ವಿ.ಸೋಮಣ್ಣ ಚಾಮುಂಡಿಬೆಟ್ಟದಲ್ಲಿ ಉಸ್ತುವಾರಿ ಸಚಿವರಿಂದ ಕಾಮಗಾರಿಗೆ ಪರಿಶೀಲನೆ ನೀಡಲಾಯಿತು. ಸೋಮಣ್ಣ ಜೊತೆ ಕಾಮಗಾರಿಗಳ ಪರಿಶೀಲನೆ ಶಾಸಕ ಜಿ.ಟಿ.ದೇವೇಗೌಡ ನಡೆಸಿದರು. ಇದೇ ವೇಳೆ  ಸಂಸದ ಪ್ರತಾಪ್‌ಸಿಂಹ, ಶಾಸಕ ಎಲ್‌.ನಾಗೇಂದ್ರರೊಂದಿಗೆ ಚಾಮುಂಡಿಬೆಟ್ಟದ ಸುತ್ತಮುತ್ತಲಿನ ಕಾಮಗಾರಿ ಪರಿಶೀಲನೆ ಕೂಡ ಮಾಡಲಾಯ್ತು. ಅಂಗಡಿ ತೆರವು, ಹಾಗೂ ಕಾಂಪೌಂಡ್ ತೆರವು ಆಗಿರುವ ಸ್ಥಳ ಪರಿಶೀಲನೆ ಮಾಡಿದ ಸೋಮಣ್ಣ ಬೆಟ್ಟದಲ್ಲಿ ನೈರ್ಮಲ್ಯ ಕಾಪಾಡುವಂತೆ ಸೂಚನೆ ನೀಡಿದರು. ಜೊತೆಗೆ ಸಾರ್ವಜನಿಕರಿಗೆ ತಾವೆ ಖುದ್ದಾಗಿ ಸಿಹಿ ವಿತರಣೆ ಕೂಡ ಮಾಡಿದರು.

ಈ ವೇಳೆ ಮಾತನಾಡಿದ ವಿ ಸೋಮಣ್ಣ, ಇಂದು ನರೇಂದ್ರ ಮೋದಿಯವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಚಾಮುಂಡೇಶ್ವರಿ ‌ನಾವೇಲ್ಲ ಪೂಜೆ ಸಲ್ಲಿಸಿದ್ದೇವೆ. ನಮ್ಮ‌ಜೊತೆ ಹಿರಿಯರಾದ ಜಿಟಿಡಿಯವರು ಭಾಗಿಯಾಗಿದ್ದಾರೆ. ನಮ್ಮ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ನೆಚ್ಚಿನ ಪ್ರಧಾನಿಗೆ ಶುಭ‌ಹಾರೈಸಿದ್ದೆವೆ ಎಂದರು.

ಇಂದು ಬೆಟ್ಟದಲ್ಲಿನ ಕಾಮಗಾರಿ ನೋಡಲು ಬಂದಿದ್ದೇನೆ. ಸೆ.26ರ ಒಳಗೆ ಎಲ್ಲ ಕೆಲಸ ಮುಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸೆ.29ದಸರಾ ಉದ್ಘಾಟನೆ ನಡೆಯಲಿದೆ. ಎಲ್ಲ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.ಅಂಗಡಿ ತೆರವಾದವರಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಆ ತಾಯಿ ಯಾರನ್ನು ಕೈ ಬಿಡೋಲ್ಲ. ಆ ತಾಯಿಯನ್ನು ನಂಬಿದವರನ್ನ ನಾವು ಕೈ ಬಿಡೋಲ್ಲ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights