ಫ್ಯಾನ್ಸ್ ಗುಂಡಾಗಿರಿ? : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವಿರುದ್ಧ FIR..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವಿರುದ್ದ FIR ದಾಖಲಾಗಿದೆ. ಆರ್ ಆರ್ ನಗರದ ದರ್ಶನ್ ಮನೆ ಐಡಿಯಲ್ಸ್ ಹೊಮ್ಸ್ ಬಳಿ ದರ್ಶನ್ ಹುಟ್ಟಹಬ್ದದ ವೇಳೆ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಅಭಿಮಾನಿಗಳು ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಲಾಗುತ್ತಿದೆ.
ದರ್ಶನ್ ಹುಟ್ಟು ಹಬ್ಬದ ದಿನ ಕರ್ತವ್ಯಕ್ಕೆ ನಿಯೋಜನೆಕೊಂಡಿದ್ದ ಜಾನ್ಞಭಾರತಿ ಪೊಲೀಸ್ ಠಾಣೆ ಪೇದೆ ದೇವರಾಜ್ ಮೇಲೆ ಹಲ್ಲೆ ಮಾಡಲಾಗಿದೆ.
ಮೊನ್ನೆಯಷ್ಟೇ ದಚ್ಚು ತಮ್ಮ ಹುಟ್ಟುಹಬ್ಬವನ್ನು ಭಾರೀ ಅದ್ದೂರಿಯಾಘಿ ಆಚರಿಸಿಕೊಂಡರು. ಈ ಸಮಯದಲ್ಲಿ ದಾಸನ ಅಭಿಮಾನಿಗಳ ದಂಡೆ ನೆರೆದಿತ್ತು. ಅಭಿಮಾನಿಗಳಿಗೆ ಸಾಲಾಗಿ ನಿಲ್ಲಿಸಲು ಮುಂದಾದ ಪೇದೆ ಮೇಲೆ ದಚ್ಚು ಫ್ಯಾನ್ಸ್ ಕಲ್ಲಿನಿಂದ ಕಣ್ಣಿಗೆ ಹೊಡೆದು ಗಾಯ ಪಡಿಸಿದ್ದಾರೆಂದು ಪೇದೆ ದೂರಿದ್ದಾರೆ. ಸದ್ಯ ಕಣ್ಣಿಗೆ ಗಾಯಾ ಹಿನ್ನಲೆ ಖಾಸಗಿ ಆಸ್ಪತ್ರೆಯಲ್ಲಿ ಪೇದೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದರ್ಶನ್ ಅಭಿಮಾನಿಗಳು, ಬರ್ತಡೇ ಆಯೋಜಕರ ವಿರುದ್ಧ RR ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.