ಬೆಳ್ಳಂ ಬೆಳಿಗ್ಗೆ ಗ್ರಾಮದಲ್ಲಿ ಆತಂಕ ಹುಟ್ಟಿಸಿದ ಗಜಪಡೆ : ದೃಶ್ಯ ಸೆರೆ
ಹಾಸನದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಬೆಳ್ಳಂ ಬೆಳಿಗ್ಗೆ ಗ್ರಾಮಕ್ಕೆ ನುಗ್ಗಿದ ಬಂದು ಎರಡು ಕಾಡಾನೆಗಳು ಆತಂಕ ಹುಟ್ಟಿಸಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಘಟನೆ ನಡೆದಿದೆ. ಯಸಳೂರು ಚಂಗಡಹಳ್ಳಿ ರಸ್ತೆಯಲ್ಲಿ ಬೆಳಗ್ಗೆ 5ರ ವೇಳೆ ರಾಜಾರೋಷವಾಗಿ ಸಂಚಾರ ಮಾಡಿವೆ. ಕಾಂಪೌಂಡ್ ಜಂಪ್ ಮಾಡಿ ಒಳ ಹೋಗುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಆನೆಗಳ ಉಪಟಳ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.