ಮಲೆನಾಡಲ್ಲಿ ಮಳೆ ಅವಾಂತರ : ವಿದ್ಯುತ್ ಇಲ್ಲದೆ ಕತ್ತಲಲ್ಲಿರುವ ಏಳು ಗ್ರಾಮಗಳು
ಮಲೆನಾಡಲ್ಲಿ ಮಳೆ ಅವಾಂತರ ಇನ್ನೂ ಸರಿಯಾಗಿಲ್ಲ. ಮನೆ- ಜನ- ಜಾನುವಾರಗಳನ್ನು ಕಳೆದುಕೊಂಡ ಜನ ತಮ್ಮ ಸೂರಿನತ್ತ ಹೆಜ್ಜೆ ಇಟ್ಟಿದ್ದಾರೆ. ಕುಡಿಯಲು ನೀರಿಲ್ಲ, ತಿನ್ನಲು ಊಟವಿಲ್ಲ, ಉಡಲು ಬಟ್ಟೆ ಇಲ್ಲ. ಇದರ ನಡುವೆ ಸಂಜೆಯಾಗುತ್ತಲೇ ಕತ್ತಲು ಆವರಿಸುತ್ತದೆ.
ಹೌದು… ಚಿಕ್ಕಮಗಳೂರಿನ ಏಳು ಗ್ರಾಮಗಳಲ್ಲಿ ವಿದ್ಯುತ್ತೇ ಇಲ್ಲ. 15 ದಿನದಿಂದ ವಿದ್ಯುತ್ ಇಲ್ಲದೆ ಜನರ ಪರದಾಡುವಂತಾಗಿದೆ. ಮಹಾಮಳೆಗೆ ವಿದ್ಯುತ್ ಸಂಪರ್ಕ ಕಳೆದುಕೊಂಡು ಗ್ರಾಮಗಳ ಕಂಗಾಲಾಗಿವೆ.
ವಿದ್ಯುತ್ ಇಲ್ಲದೆ ವಿದ್ಯಾರ್ಥಿಗಳು ಸೀಮೆಎಣ್ಣೆ ದೀಪದಲ್ಲಿ ಓದುತ್ತಿದ್ದಾರೆ. ಯಾವುದೇ ತೊಂದರೆ ಸಂಭವಿಸಿದರೆ ಮತ್ತೊಬ್ಬರಿಗೆ ಮಾಹಿತಿ ನೀಡಲು ಕೂಡ ಮೊಬೈಲ್ ಚಾರ್ಜ್ ಇರದಂತ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಮೊಬೈಲ್ ಚಾರ್ಚ್ ಗಾಗಿ ಪಕ್ಕದ ಊರಿಗೆ ಜನ ಹೋಗುತ್ತಿದ್ದಾರೆ ಅಂದ್ರೆ ನೀವೇ ಯೋಚನೆ ಮಾಡಿ. ಅಲ್ಲಿನ ಸ್ಥಿತಿ ಭಯ ಹೇಗಿರಬೇಡ ಅಂತ..
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ಎನ್.ಆರ್.ಪುರ ತಾಲೂಕಿನ ತತ್ಕೊಳ, ಎಸ್ಟೇಟ್ ಕುಂದೂರು, ಹಳ್ಳಿಬೈಲು, ಹುಲ್ಲೆಮನೆ, ಬಾಳೂರು ಚನ್ನಹಡ್ಲು, ಹೊಸಗದ್ದೆ ಗ್ರಾಮದಲ್ಲಿ ವಿದ್ಯುತ್ ಇಲ್ಲ. 15 ದಿನ ಕಳೆದರೂ ಇನ್ನೂ ರಿಪೇರಿಯಾಗಿಲ್ಲ ವಿದ್ಯುತ್ ಸಂಪರ್ಕ. ಹೀಗಾಗಿ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.