ಮಂಗಳೂರಿನಲ್ಲಿ ಗೋಳಿಬಾರ್ : ಪೊಲೀಸಪ್ಪನ ಮಾತು ಕೇಳಿ ನಿಯೋಜಿತ ಕೃತ್ಯ ಎಂದ ಮಂದಿ
ಅಸಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಮಂಗಳೂರಿನಲ್ಲಿ ಗೋಳಿಬಾರ್ ನಡೆಸಿದ್ದು, ಈ ವೇಳೆ ಪೊಲೀಸ್ ಅಧಿಕಾರಿಯೋರ್ವ ಮಾತನಾಡುವ ದೃಶ್ಯದ ವಿಡಿಯೋ ವೈರಲ್ ಆಗಿದೆ.
ಫೈರಿಂಗ್ ಮಾಡುತ್ತಿದ್ದ ಪೊಲೀಸರ ಬಳಿ ಪೊಲೀಸ್ ಅಧಿಕಾರಿಯೋರ್ವ ಹೋಗಿ ‘ಅಲ್ಲಪ್ಪ ಪೈರಿಂಗ್ ಮಾಡಿದ್ದಿಯಲ್ಲ ಒಂದು ಗುಂಡು ಕೂಡ ಬಿದ್ದಿಲ್ಲ ಅಲ್ಲ. ಒಬ್ಬನೂ ಕೂಡ ಸತ್ತಿಲ್ವ’ ಎಂದು ಪೊಲೀಸ್ ಅಧಿಕಾರಿ ಮಾತನಾಡುವ ವಿಡಿಯೋದ ದೃಶ್ಯ ಸೆರೆಯಾಗಿದೆ.
ಪೊಲೀಸ್ ಅಧಿಕಾರಿ ಹರ್ಷ ನಿನ್ನೆ ಹೇಳಿಕೆ ಕೊಟ್ಟು ಪೊಲೀಸರನ್ನು ಹತ್ಯೆ ಮಾಡಲು ಮುಂದಾದಾಗ ಕ್ರಮವನ್ನು ಕೈಗೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದೀಗ ಪೊಲೀಸ್ ಅಧಿಕಾರಿಯೋರ್ವ ಮಾತನಾಡುವ ವಿಡಿಯೋದಿಂದ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುವುದು ಸಾರ್ವಜನಿಕರು ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಫೈರಿಂಗ್ ಮಾಡಿದ್ದಿಯಲ್ಲ, ಒಬ್ಬನೂ ಕೂಡ ಸತ್ತಿಲ್ವ-ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿ ಹೇಳುವ ವಿಡಿಯೋ ವೈರಲ್
Posted by Rashtradhwani on Thursday, December 19, 2019