ಮಂಗಳೂರು ಗಲಾಟೆ ಸಾಕ್ಷ್ಯ ರಿಲೀಸ್ ಮಾಡಿದ ಹೆಚ್.ಡಿ.ಕೆ..! : ವಿಡಿಯೋದಲ್ಲಿ ಪೊಲೀಸರ ಅಸಲಿಯತ್ತು ಬಯಲು
19.12.2019 ರಂದು ಮಂಗಳೂರಿನ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಝಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಡಿಯೋ ತುಣುಕುಗಳನ್ನ ಬಿಡುಗಡೆ ಮಾಡಿದ್ದಾರೆ.
ಹೌದು… ಗೋಲಿಬಾರ್ ಅನ್ನು ಸಮರ್ಥಿಸಿಕೊಂಡ ಪೊಲೀಸ್ ಇಲಾಖೆ, ಪ್ರತಿಭಟನಾಕರದ್ದೇ ತಪ್ಪು ಅನ್ನೋ ಕೆಲ ಸಾಕ್ಷ್ಯಾ ದೃಶ್ಯಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಂದು ಮಾಜಿ ಸಿಎಂ ಕುಮಾರಸ್ವಾಮಿ 35 ತುಣುಕುಗಳ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ವಿಡಿಯೋದ ಬಹುತೇಕ ದೃಶ್ಯಗಳಲ್ಲಿ ಪೊಲೀಸರ ಲಾಟಿ ಚಾರ್ಚ್, ಕಲ್ಲು ತೋರಾಟ ಹಾಗೂ ಗೋಲಿಬಾರ್ ಮಾಡಿದ ದೃಶ್ಯಗಳಿವೆ. ಆ ಮೂಲಕ ಪೊಲೀಸರಿಂದಲೇ ದೌರ್ಜನ್ಯ ಮಾಡಲಾಗಿದೆ ಎನ್ನುವ ಸಾಕ್ಷ್ಯಯನ್ನು ಬಿಡುಗಡೆ ಮಾಡಿದ್ದಾರೆ.
ಜೊತೆಗೆ ಪೊಲೀಸರಿಂದಲೇ ದೌರ್ಜನ್ಯ ನಡೆದಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಅಮಾಯಕರನ್ನು ಪೊಲೀಸರು ಬಲಿಪಡೆದು ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿದ್ದಾರೆ. ಅದಕ್ಕೆ ತಕ್ಕದಾದ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ.