ಮರಳು ತುಂಬಿದ್ದ ಟಿಪ್ಪರ್ ಹರಿದು 55 ಕುರಿಗಳ ಸಾವು, ಕುರಿಗಾಯಿಗಳ ಕಣ್ಣೀರು

ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನ ಹರಿದ ಹಿನ್ನೆಲೆ 55 ಕುರಿಗಳು ಮೃತಪಟ್ಟಿದ್ದು,15 ಕುರಿಗಳು ಗಂಭೀರ ಗಾಯಗೊಂಡಿವೆ.

ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಸಮೀಪದ ಸೇತುವೆ ಮೇಲೆ ಇಂದು ನಸುಕಿನ ಜಾವ ಘಟನೆ ಜರುಗಿದೆ. ಹುಣಸಗಿ ತಾಲೂಕಿನ ಕಮಲಪುರ ಗ್ರಾಮದ ಭೀಮಣ್ಣ ಹೊಸಮನಿ,ದ್ಯಾಮಣ್ಣ ಹೊಸಮನಿ ಅವರಿಗೆ ಸೇರಿದ್ದ ಕುರಿಗಳು ಮೃತಪಟ್ಟಿದ್ದಾವೆ.ಅಂದಾಜು 6 ಲಕ್ಷ ರೂ ಬೆಲೆ ಬಾಳುವ ಕುರಿಗಳು ಮೃತಪಟ್ಟಿದ್ದಾವೆ.

ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದು,ಟಿಪ್ಪರ್ ವಶಪಡಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಸುರಪುರ ತಹಶಿಲ್ದಾರ ಲಿಂಗಣ್ಣ ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುರಿಸಾಕಾಣಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುರಿಗಾಯಿಗಳು ಕುರಿಗಳು ಕಳೆದುಕೊಂಡು ಕಣ್ಣೀರು ಹಾಕುವಂತಾಗಿದೆ.ಕುರಿಗಳ ಮುಂದೆ ಕುರಿಗಾಯಿಗಳು ಕಣ್ಣೀರು ಹಾಕಿದ್ದು ಹೃದಯ ಕಲುವಂತಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights