ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿ…!
ಮಳೆ ಆರ್ಭಟಕ್ಕೆ ರಸ್ತೆ ಕುಸಿದು ಲಾರಿ ಪಲ್ಟಿಯಾದ ಘಟನೆ ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಕಡ್ಲರಬಾಳು ರಸ್ತೆಯ ಗ್ರಾಮದ ಮಧ್ಯೆ ನಡೆದಿದೆ.
ಸಿಮೆಂಟ್ ರಸ್ತೆಯ ಸೇತುವೆ ಬಳಿ ರಸ್ತೆಯೊಳಗೆ ಸಿಕ್ಕಿಕೊಂಡ ಟಿಪ್ಪರ್ ಲಾರಿ ಪಲ್ಟಿಯಾಗಿದೆ. ಕಳಪೆ ಸಿಮೆಂಟ್ ಕಾಮಗಾರಿಯಿಂದ ಕುಸಿದ ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಟಿಪ್ಪರ್ ಲಾರಿ ಚಾಲಕ ಬಚಾವಾಗಿದ್ದಾನೆ.