ಮಾನಮರ್ಯಾದೆ ಇದ್ದಿದ್ರೆ ಶ್ರೀರಾಮುಲು ಬಿಜೆಪಿಗೆ ರಾಜೀನಾಮೆ ನೀಡ್ತಿದ್ರು – ಸಿದ್ದರಾಮಯ್ಯ
ಮಾನಮರ್ಯಾದೆ ಇದ್ದಿದ್ರೆ ಶ್ರೀರಾಮುಲು ಬಿಜೆಪಿಗೆ ರಾಜೀನಾಮೆ ನೀಡ್ತಿದ್ರು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶ್ರೀರಾಮುಲುರನ್ನ ಡಿಸಿಎಂ ಮಾಡ್ತಿವಿ ಅಂತ ಪ್ರಚಾರ ಮಾಡಿದ್ರು. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ರಾ? ನಿಜವಾಗಿಯೂ ಅವರಿಗೆ ಮಾನಮರ್ಯಾದೆ ಇದ್ದಿದ್ರೆ ಬಿಜೆಪಿ ಬಿಟ್ಟು ಹೊರಗೆ ಬರ್ತಿದ್ರು ಎಂದು ವಾಗ್ದಾಳಿ ಮಾಡಿದ್ದಾರೆ.
ಅವರ ನನ್ನ ಬಗ್ಗೆ ಹತಾಶೆಯಿಂದ ಮಾತನಾಡುತ್ತಾರೆ. ನನ್ನ ವಿರುದ್ದ ಬಾದಾಮಿಯಲ್ಲಿ ಸೋತಿದ್ದಾರಲ್ಲ ಅದಕ್ಕೆ ಹತಶಾರಾಗಿ ಮಾತನಾಡುತ್ತಿದ್ದಾರೆ. ಎಸ್ಟಿಗೆ 7% ಮಿಸಲಾತಿ ಮಾಡದಿದ್ರೆ ಒಂದು ನಿಮಿಷ ಇರೋಲ್ಲ ಅಂತ ಹೇಳಿದ್ರು. ಇವರೆಲ್ಲ ಸ್ವಾರ್ಥದ ರಾಜಕಾರಣ ಮಾಡ್ತಾರೆ. ಇವರ ಮಾತುಗಳಿಗೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.