ಮಾಸಾಂತ್ಯಕ್ಕೆ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ..
ನಾಳೆ ಬಾ ಎಂಬಂತಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ಕೊನೆಗೂ ಮಾಡಿ ಮುಗಿಸಲು ಮುಹೂರ್ತ ನಿಗದಿ ಮಾಡಲಾಗಿದೆ. ಹೈಕಮಾಂಡ್ ಒಪ್ಪಿಗೆಗೂ ಕಾಯದೇ ಮಾಸಾಂತ್ಯಕ್ಕೆ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಉಪಚುನಾವಣೆ ಮುಗಿದು ತಿಂಗಳ ಮೇಲಾದರೂ ಇನ್ನೂ ಸಂಪುಟ ವಿಸ್ತರಣೆ ಮಾಡಲಾಗದೇ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿ ತಾವು ಅಂದುಕೊಂಡಂತೆ ಮಾಸಾಂತ್ಯಕ್ಕೆ ವಿಸ್ತರಣೆ ಮಾಡಿಯೇ ತೀರಲು ತೀರ್ಮಾನಿಸಿದ್ದಾರೆ.
ಈ ಗಡುವಗೆ ಮುನ್ನ ಸಿಎಂ ದಿಲ್ಲಿಗೆ ತೆರಳುವ ಯಾವುದೇ ಕಾರ್ಯಕ್ರಮ ಇಲ್ಲ. ಆದರೂ ಸಿಎಂ ವಿಸ್ತರಣೆ ಘೋಷಣೆ ಮಾಡಿರುವುದನ್ನು ಗಮನಿಸಿದರೇ ಹೈಕಮಾಂಡ್ ಮೇಲೆಯೇ ಒತ್ತಡ ಹಾಕುವ ತಂತ್ರಕ್ಕೆ ಬಿಎಸ್ವೈ ಮುಂದಾಗಿರುವಂತಿದೆ. ಎಲ್ಲೋ ಒಂದು ಕಡೆ ನಿರಂತರ ವಿಳಂಬದಿಂದ ಮುಖ್ಯಮಂತ್ರಿ ರೋಸಿಹೋಗಿರುವಂತಿದೆ.
ಹಾಸನದಲ್ಲಿ ಸೋಮವಾರ ಮಾತನಾಡಿದ ಯಡಿಯೂರಪ್ಪನವರು ಜನವರಿ ಅಂತ್ಯದ ವೇಳೆಗೆ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದರು. ಆದರೆ ಈ ಬಹು ನಿರೀಕ್ಷಿತ ವಿಸ್ತರಣೆಯ ಸ್ವರೂಪದ ಬಗ್ಗೆ ಮುಖ್ಯಮಂತ್ರಿ ತುಟಿ ಬಿಚ್ಚಲಿಲ್ಲ..
hi!,I love your writing very so much! proportion we keep in touch more
about your post on AOL? I need a specialist on this space to resolve my problem.
Maybe that is you! Having a look ahead to peer you.