ಮೃತ ವಯೋವೃದ್ಧನ ಸಾವಿನ ಸುದ್ದಿ ಕೇಳಿದರೂ ಆಸ್ಪತ್ರೆಗೆ ಬಾರದ ಮಕ್ಕಳು : ಕಣ್ಣೀರು ಹಾಕಿದ ರೋಗಿಗಳು

ಮೃತ ವಯೋವೃದ್ಧನ ಸಾವಿನ ಸುದ್ದಿ ಕೇಳಿದರೂ ಮಕ್ಕಳು ಆಸ್ಪತ್ರೆಗೆ ಬಾರದನ್ನು ಕಂಡು ಪಕ್ಕದ ರೋಗಿಗಳು ಮಮ್ಮಲ ಮರುಗಿ ಕಣ್ಣೀರು ಹಾಕಿದ ಘಟನೆ ಬಾಗಲಕೋಟೆ ಬಾದಾಮಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ನಿನ್ನೆ ರಾತ್ರಿ 8ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ 75ವರ್ಷದ ಶಂಕ್ರಪ್ಪ ವಯೋವೃದ್ಧ ಸಾವನ್ನಪ್ಪಿದವರು. ಆಸ್ಪತ್ರೆ ವೈದ್ಯರು, ಸಿಬ್ಬಂದಿ ವಯೋವೃದ್ಧ ಅಸುನೀಗಿ 24ಗಂಟೆಯಾಗಿದ್ರೂ ಶವಾಗಾರಕ್ಕೆ ಸಾಗಿಸದೇ ಪಕ್ಕದಲ್ಲಿ ರೋಗಿಗಳ ಬೆಡ್ ಮೇಲೆ ಬಿಟ್ಟಿದ್ದರು.

ಭೀಮವ್ವ ಎಂಬುವರು ನಿನ್ನೆ ಬಾದಾಮಿ ಸರ್ಕಾರಿ ಆಸ್ಪತ್ರೆಗೆ ವಯೋವೃದ್ಧನನ್ನು ಅನಾರೋಗ್ಯ ಹಿನ್ನೆಲೆ ದಾಖಲಿಸಿದ್ರು. ಶಂಕ್ರಪ್ಪನ ಪುತ್ರರಿಗೆ ಫೋನ್ ಮಾಡಿದ್ರೂ ಬಾರದ ಹಿನ್ನೆಲೆ ರಾತ್ರಿ ಶವ ಬಿಟ್ಟು ಭೀಮವ್ವ ಹೋಗಿದ್ದಾರೆ. ನಮ್ಮನ್ನು ಬಿಟ್ಟು ಹೋಗಿ ಶಂಕ್ರಪ್ಪ ಮೂವತ್ತು ವರ್ಷವಾಯ್ತು ಅಲ್ಲೆ ಬಿಸಾಕಿ ಎಂದಿದ್ರಂತೆ ಪಾಪಿ ಪುತ್ರರು.

ಶಂಕ್ರಪ್ಪ ಮೂಲತಃ ಬನಹಟ್ಟಿಯವ. ಬನಹಟ್ಟಿಯಲ್ಲಿರೋ ಮೃತ ಶಂಕ್ರಪ್ಪನ ಇಬ್ಬರು ಪುತ್ರರು. ಹುಲಿಗೆಮ್ಮಕೊಳ್ಳಕ್ಕೆ ಬಂದು ಐದಾರು ತಿಂಗಳಿಂದ ಭೀಮವ್ವ ಕುಟುಂಬಸ್ಥರೊಂದಿಗೆ ವಾಸವಾಗಿದ್ದ ಶಂಕ್ರಪ್ಪ. ಭೀಮವ್ವ ,ಲಕ್ಕಪ್ಪ ದಂಪತಿ ಹುಲಿಗೆಮ್ಮಕೊಳ್ಳದಲ್ಲಿ ಅರ್ಚಕರಾಗಿದ್ದಾರೆ.

ಮೃತದೇಹಕ್ಕೆ ಯಾರು ದಿಕ್ಕು ಎಂದು ಪಕ್ಕದ ಬೆಡ್ ರೋಗಿಗಳು ಮರಕ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಅನಾಥವಾಗಿ ಮೃತದೇಹ ಬಿದ್ದಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights