ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಮೇಲೆ ದಾಳಿ: ಅಭಿಮಾನಿಗಳು ಆತಂಕ
ಟಾಲಿವುಡ್ ಖ್ಯಾತ ನಟ ಚಿರಂಜೀವಿ ಹಾಗು ರಾಮ್ ಚರಣ್ ಮೇಲೆ ದಾಳಿ ನಡೆದಿದೆ ಎನ್ನುವ ವಿಚಾರ ಭಾರೀ ಸುದ್ದಿಯಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಭಯ ಭೀತರಾಗಿ ಆತಂಕಕ್ಕೆ ಒಳಗಾಗಿದ್ದಾರೆ.
ಉಪಾಸನ ಕೊನಿಡೆಲಾ ಅವರ 92 ವಯಸ್ಸಿನ ಅಜ್ಜ ಉಮಪತಿ ರಾವ್ ಅವರು ಮೇ 27 ರಂದು ಕೊನೆಯುಸಿರೆಳೆದರು. ಅಂತಿಮ ದರ್ಶನಕ್ಕಾಗಿ ಚಿರಂಜೀವಿ, ರಾಮ್ ಚರಣ್ ಮತ್ತು ಉಪಾಸನ ಅವರು ಭಾನುವಾರ ನಿಜಾಮಾಬಾದ್ನ ಡೊಮಕೊಂಡಕ್ಕೆ ಹೋಗಿದ್ದರು.
ಅಲ್ಲಿ ಅವರ ಕುಟುಂಬ ಜೇನು ನೊಣಗಳ ದಾಳಿಗೆ ಗುರಿಯಾಗಿದ್ದಾರೆ. ಅದನ್ನು ಮೆಗಾಸ್ಟಾರ್ ಚಿರಂಜೀವಿ ಮೇಲೆ ದಾಳಿ ಎಂದು ಸುದ್ದಿ ಮಾಡಲಾಗಿತ್ತು. ಅದಕ್ಕಾಗಿ ಅವರ ಅಭಿಮಾನಿಗಳು ಆತಂಕಗೊಂಡಿದ್ದರು.
“ಡೊಮಕೊಂಡದಲ್ಲಿ ಜೇನುಹುಳಗಳ ಘಟನೆಯು ಬಹಳ ಸಣ್ಣ ವಿಷಯವಾಗಿದೆ, ಅದು ತಪ್ಪಾಗಿ ಪರಿಗಣಿಸಲ್ಪಟ್ಟಿದೆ. ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ಸ್ಟಾರ್ ರಾಮ್ ಚರಣ್ ಇಬ್ಬರೂ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ, ಅವರಿಗೆ ಯಾವ ಹಾನಿಯೂ ಆಗಿಲ್ಲ ಎಂದು ಕೊನಿಡೆಲಾ ಅವರ ಕುಟುಂಬದವರು ತಿಳಿಸಿದ್ದಾರೆ.
ಉಪಾಸನ ಅವರ ಅಜ್ಜ ತೀರಿಕೊಂಡಿದ್ದು, ಅವರ ಮಗ ಯುಎಸ್ನಲ್ಲಿದ್ದರಿಂದಾಗಿ ಅವರು ಬರುವವರೆಗೂ ಕುಟುಂಬವು ಕಾಯುತ್ತಿರುವುದರಿಂದ ಅವರ ಅಂತ್ಯ ಸಂಸ್ಕಾರವನ್ನು ಭಾನುವಾರದವರೆಗೆ ಮಾಡಲಾಗಿದೆ.
ಅಂತಿಮ ಕಾರ್ಯದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಭಾಗವಹಿಸಿದ್ದ ಸಂದರ್ಭದಲ್ಲಿ ಜೇನುಹುಳುಗಳು ದಾಳಿ ಮಾಡಿವೆ.