ಯುವಕನ ಕುತ್ತಿಗೆ ಮೋಟಾರ್ ಸೈಕಲ್ ಗೆ ಕಟ್ಟಿ 15 ಕಿಮೀ ದೂರದವರೆಗೆ ಎಳೆದೊಯ್ದಿ…!
ಉತ್ತರ ಪ್ರದೇಶದ ಮೀರತ್ ನಲ್ಲಿ ಅಪರಿಚಿತ ದುಷ್ಕರ್ಮಿಗಳು ಕ್ರೌರ್ಯ ಮೆರೆದಿದ್ದಾರೆ. 21 ವರ್ಷದ ಯುವಕನ ಕುತ್ತಿಗೆಯನ್ನು ಮೋಟಾರ್ ಸೈಕಲ್ ಗೆ ಕಟ್ಟಿ 15 ಕಿಮೀ ದೂರದವರೆಗೆ ಎಳೆದೊಯ್ದಿದ್ದಾರೆ.
ಆತನ ದೇಹದೊಳಕ್ಕೆ ಗುಂಡು ಹೊಕ್ಕಿತ್ತು. ಆ ರೀತಿ ಎಳೆದೊಯ್ದಿದ್ದರಿಂದ ಎಡಗಾಲು ಕತ್ತರಿಸಿ ಎಲ್ಲೋ ಬಿದ್ದು ಹೋಗಿದೆ. ಮುಕುಲ್ ಕುಮಾರ್ ಎಂಬ ಯುವಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಬಳಿಕ ಎಳೆದೊಯ್ಯಲಾಗಿದೆಯಾ? ಅಥವಾ ನಂತರ ಗುಂಡು ಹಾರಿಸಲಾಗಿದ್ಯಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
ಆತನ ದೇಹದ ತುಂಬೆಲ್ಲಾ ಗಾಯದ ಗುರುತುಗಳಿದ್ವು. ಮೀರತ್ ನಿಂದ 15 ಕಿಮೀ ದೂರದಲ್ಲಿ ಯುವಕನ ಮನೆಯಿದೆ. ಅಲ್ಲಿಯವರೆಗೂ ರಕ್ತ ಚೆಲ್ಲಾಡಿತ್ತು. ಖಾರ್ಕೋಡಾ ಎಂಬಲ್ಲಿ ಮೃತದೇಹವನ್ನು ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಕೊಲೆಯಾದ ಯುವಕ ನಾಚಿಕೆ ಸ್ವಭಾವದವನಾಗಿದ್ದ, ಅವನಿಗೆ ಯಾರೂ ಶತ್ರುಗಳಿರಲಿಲ್ಲ ಅಂತಾ ಮನೆಯವರು ಹೇಳಿದ್ದಾರೆ. ತಾಯಿ ಮತ್ತು ಸಹೋದರನೊಂದಿಗೆ ಆತ ನೆಲೆಸಿದ್ದ. ಹತ್ಯೆಗೆ ಕಾರಣ ಏನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ.