ರಾಯಚೂರು ಬ್ರೇಕಿಂಗ್ : ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆ….!
ರಾಯಚೂರಿನ ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದ ಯುವತಿ ಸದ್ಯ ಶವವಾಗಿ ಪತ್ತೆಯಾಗಿರುವುದು ಎಲ್ಲರಲ್ಲ ಆತಂಕ ಮೂಡಿಸಿದೆ.
17 ವರ್ಷದ ಮಮತಾ ಬಡಿಗೇರ್ ನಾಪತ್ತೆಯಾಗಿದ್ದ ಯುವತಿ. ನಗರದ ಪ್ರತಿಷ್ಟಿತಿ ನವೋದಯ ಇಂಜನಿಯರಿಂಗ್ ಕಾಲೇಜಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಇದೇ ತಿಂಗಳು (ಆಗಸ್ಟ್) 16 ಶುಕ್ರವಾರದಂದು ಯುವತಿ ಬಸ್ ನಿಲ್ದಾಣದ ಬಳಿ ನಾಪತ್ತೆಯಾಗಿದ್ದಳು. ಯುವತಿ ನಾಪತ್ತೆ ಕುರಿತಂತೆ ರಾಯಚೂರಿನ ಸದರ್ ಬಜಾರ್ ಮಹಿಳಾ ಠಾಣೆಯಲ್ಲಿ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.
ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಮಮತಾ ಆಂದ್ರ ಪ್ರದೇಶದ ಕರ್ನೂಲ್ ಗುಡೂರು ಠಾಣಾ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೆನ್ನೆ ಯುವತಿಯ ಮೃತ ದೇಹ ಪತ್ತೆಯಾಗಿದೆ.
ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಈಗಾಗಲೇ ವಿರೇಂದ್ರ ಅನ್ನೋ ಓರ್ವ ಆರೋಪಿಯನ್ನ ಪೊಲಿಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.