ವಾಲ್ಮೀಕಿ ಜಯಂತಿ ಆಚರಣೆ ವೇಳೆ ಭಿನ್ನಾಭಿಪ್ರಾಯ, ಹಳೆ ವೈಷಮ್ಯ : ಎರಡು ಗುಂಪುಗಳ ಮಧ್ಯೆ ಗಲಾಟೆ – ಓರ್ವ ಸಾವು
ವಾಲ್ಮೀಕಿ ಜಯಂತಿ ಆಚರಣೆ ವೇಳೆ ಭಿನ್ನಾಭಿಪ್ರಾಯ ಉಂಟಾಗಿ ಒಂದೇ ಕೋಮಿನ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದು ಓರ್ವ ಸಾವನ್ನಪ್ಪಿದ್ದು, ಆರು ಜನ್ರಿಗೆ ಸಣ್ಣ ಪುಟ್ಟ ಗಾಯವಾಗಿದೆ.
ಹೌದು.. ಹಳೆ ವೈಷಮ್ಯ ಹಿನ್ನೆಲೆ ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಗ್ಯಾನಪ್ಪ ಪೂಜಾರಿ ಎಂಬಾತ ಗಲಾಟೆಯಲ್ಲಿ ಕುಡುಗೋಲಿನಿಂದ ಶಿವಪ್ಪ ಎನ್ನುವವರ ಎದೆ, ಹೊಟ್ಟೆಗೆ ಹೊಡೆದ ಪರಿಣಾಮ ಶಿವಪ್ಪ (45) ಸಾವನ್ನಪ್ಪಿದ್ದಾರೆ.
ತೀವ್ರ ಗಾಯಗೊಂಡಿದ್ದ ಶಿವಪ್ಪ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಇನ್ನುಳಿದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಪ್ಪ ಪೂಜಾರಿ,KSRTC ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ರು. ಹಳೆ ವೈಷಮ್ಯ ಜೊತೆಗೆ , ವಾಲ್ಮೀಕಿ ಜಯಂತಿಯಂದು ಗಲಾಟೆ ನಡೆದಿತ್ತು. ಮತ್ತೆ ನಿನ್ನೆ ತಡರಾತ್ರಿ ಒಂದೇ ಕೋಮಿನ ಮಧ್ಯೆ ಗಲಾಟೆ ನಡೆದು ಓರ್ವ ವ್ಯಕ್ತಿಯ ಬಲಿ ಪಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.