ವಿಜಯಪುರ ಪೊಲೀಸರ ಕಾರ್ಯಾಚರಣೆ- ಗಾಜಾ, ಬೈಕ್ ವಶ, ಓರ್ವನ ಬಂಧನ
ವಿಜಯಪುರ ಅಬಕಾರಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಆಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ವಿಜಯಪುರ ತಾಲೂಕಿನ ಅರಕೇರಿ ತಾಂಡಾದ ಅರಕೇರಿ ನಿವಾಸಿ ದೇವಜಿ ಗಂಗಾರಾಮ ರಾಠೋಡ ಎಂಬಾತನ ತೋಟದಲ್ಲಿದ್ದ 6 ಕೆಜಿ ಒಣ ಗಾಂಜಾ ಹಾಗೂ ಜಮೀನಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಬೆಳೆದಿದ್ದ 110 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಗಾಂಜಾ ಗಿಡಗಳು ಸುಮಾರು 180ಕೆಜಿ ಹಸಿ ಇವೆ. ಅಷ್ಟೇ ಅಲ್ಲ, ಆತನ ಬಳಿಯಿದ್ದ ಒಂದು ಬೈಕನ್ನೂ ಕೂಡ ವಶಪಡಿಸಿಕೊಂಡಿದ್ದಾರೆ.
ಜಮೀನು ಮಾಲೀಕ ದೇವಜಿ ರಾಠೋಡನನ್ನು ಬಂಧಿಸಲಾಗಿದ್ದು, ಅಬಕಾರಿ ಇಲಾಖೆ ಜಂಟಿ ಆಯುಕ್ತ ಮಂಜುನಾಥ್, ಉಪಾಯುಕ್ತರಾದ ಎ. ರವಿಶಂಕರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ಪಿಎಸ್ಐ ಮಹಾದೇವ ಪೂಜಾರಿ ಸಿಬ್ಬಂದಿಯಾದ ಪ್ರಕಾಶ ಜಾದವ, ಈರಣ್ಣ ಹಟ್ಟಿ, ಬೀಮಣ್ಣ ಕುಂಬಾರ, ಪರಶುರಾಮ ತೆಲಗಿ ಕಾರ್ಯಾಚಣರೆಯಲ್ಲಿ ಪಾಲ್ಗೋಂಡಿದ್ದರು.