ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣವೆಂದ ಸಚಿವ ಜಿ.ಟಿ.ದೇವೇಗೌಡ…!

ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಯೋಗೀಶ್ವರ್ ಸಮುದಾಯದ ನಾಯಕರನ್ನು ಟೀಕಿಸಿದ್ದಾರೆ. ಇದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದರು.  ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಇತ್ತು.‌ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದರು. ಆದರೆ ಇದೆಲ್ಲ ಹುಣಸೂರಿನಲ್ಲಿ ನಡೆಯೋಲ್ಲ ಎಂದು ಅವದರಿಗೆ ಗೊತ್ತಿಲ್ಲ ಅನ್ಸತ್ತೆ. ಹರೀಶ್ ಗೌಡ ಮಂಜುನಾಥ್ ಬೆನ್ನಿಗೆ ನಿಂತಿದ್ದ ಅಂದ್ರೆ. ಅದು ಅವನ ಸ್ವ ಇಚ್ಛೆ, ಅವನ ಸ್ವಾತಂತ್ರ್ಯ. ಅವನು ಯಾವ ಪಕ್ಷಕ್ಕು ಸದಸ್ಯನಲ್ಲ.

ಅವನ ಸ್ಪರ್ಧೆಗಾಗಿ ಮನೆ ಮುಂದೆ ಹುಣಸೂರಿನಲ್ಲಿ ಪ್ರತಿಭಟನೆ ಮಾಡಿದ್ರು. ಆ ವೇಳೆಯು ನಾನು ತಟಸ್ಥ ಎಂದು ಹೇಳಿದ್ದೆ. ಹುಣಸೂರಿನಲ್ಲಿ ಶೆಟ್ರು ಗೆಲ್ತಾರೆ ಅಂತ ನಾನು ಮೊದಲೆ ಹೇಳಿದ್ದೆ. ಹಾಗೆ ಈ ಚುನಾವಣೆಯಲ್ಲಿ ತಟಸ್ಥ ಎಂದು ದೇವೇಗೌಡರ ಸಮ್ಮುಖದಲ್ಲೇ ಹೇಳಿದ್ದೆ. ಹಾಗಾಗಿ ಈ ಚುನಾವಣೆಯಲ್ಲಿ ನಾನು ಯಾರ ಪರವು ಕೆಲಸ ಮಾಡಿಲ್ಲ ಎಂದಿದ್ದಾರೆ.

ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ನಾನು ಮೊದಲೇ ಹೇಳಿದ್ದೆ. ದೈವ ಶಕ್ತಿ ನನ್ನಿಂದ ಎಲ್ಲವನ್ನೂ ನುಡಿಸಿದೆ. ಹಿಂದೆ ಪುರಭವನದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಅಂತ ಹೇಳಿದ್ದೆ.
ಕುಮಾರ ಪರ್ವದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಅಂತ ನುಡಿದಿದ್ದೆ. ಮೈತ್ರಿ ಸರ್ಕಾರ ಪತನವಾದ ದಿನವೇ ಹೇಳಿದ್ದೆ. ಹುಣಸೂರು ಉಪಚುನಾವಣೆಯಲ್ಲಿ ಮಂಜುನಾಥ್ ಗೆಲ್ಲುತ್ತಾರೆ ಅಂತ. ದೈವ ಶಕ್ತಿಯಿಂದ ನಾನು ಹೇಳಿದ್ದೆಲ್ಲ ನಡೆದಿದೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights