ಸಂಸದೆ ಸುಮಲತಾ ಅಂಬರೀಷ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು….

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬ ಅಚರಣೆ ಮಾಡಲಾಯ್ತು. ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿ ಗಳ ಸಂಘ ಹಾಗೂ ಪರಿಸರ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಹುಟ್ಟುಹಬ್ಬ  ಆಚರಣೆ ಮಾಡಲಾಯ್ತು.

ತಮ್ಮ ಹುಟ್ಟು ಹಬ್ಬದ ಆಚರಣೆಗಾಗಿ ದುಂದು ವೆಚ್ಚ ಮಾಡದಂತೆ ಸಂಸದೆ ಸುಮಲತಾ ಅಭಿಮಾನಿಗಳಿಗೆ ಕರೆ ನೀಡಿದ್ದರು. ಹುಟ್ಟು ಹಬ್ಬದ ಹೆಸರಲ್ಲು ದುಂದು ವೆಚ್ಚ ಮಾಡದೆ ಪ್ರಕೃತಿ ವಿಕೋಪದ ಬಗ್ಗೆ ಕಾಳಜಿ ವಹಿಸಿ ಪರಿಸರದಲ್ಲಿ ಗಿಡ ನೆಡುವಂತೆ ಸುಮಲತಾ ಮನವಿ ಮಾಡಿದ್ದರು.

ಸಂಸದೆ ಸುಮಲತಾ ಮಾತಿನಂತೆ ಸರಳವಾಗಿ ದುಂದುವೆಚ್ಚವಿಲ್ಲದೆ ಗಿಡ ನೆಟ್ಟು ಅಭಿಮಾನಿಗಳ ಸಂಭ್ರಮಿಸಿದ್ದಾರೆ. ಅಂಬಿ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬೇಲೋರು ಸೋಮಶೇಖರ್ ನೇತೃತ್ವದಲ್ಲಿ ಆಚರಣೆ ಮಾಡಲಾಗಿದ್ದು, ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಗಿಡ ನೆಟ್ಟು ಸಂಭ್ರಮಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights