ಸರ್ಕಾರದ ಕರಿನೆರಳು, ಅಸಹಾಕಾರದ ಮಧ್ಯೆ ನಡೆಯುತ್ತಾ ನುಡಿ ಜಾತ್ರೆ…?

ಸರ್ಕಾರದ ಕರಿನೆರಳು, ಅಸಹಾಕಾರದ ಮಧ್ಯೆ ನಡೆಯುತ್ತಾ ನುಡಿ ಜಾತ್ರೆ… ? ಅನ್ನೋ ಅನುಮಾನ ಶುರುವಾಗಿದೆ. ಸಂಘರ್ಷದ ನಡೆಯೂ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದ ಭಾರೀ ಗೊಂದಲ ಉಂಟಾಗಿತ್ತು.

ಹೌದು… ಸರ್ಕಾರದ ವಿರೋಧದ ನಡೆಯೂ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆ ನಡೆಸಲಾಗುತ್ತಿದೆ. ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠ್ಠಲ್ ಹೆಗಡೆ ವಿರುದ್ಧ ನಕ್ಸಲ್ ನಂಟಿನ ಆರೋಪಕ್ಕಾಗಿ ಬದಲಾವಣೆಗೆ ಆಗ್ರಹವಾಗಿತ್ತು.  ಸಾಹಿತ್ಯ ಪರಿಷತ್ ಉಳಿಸಿ, ನಕ್ಸಲ್ ವಿರೋಧಿ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ವಿವಿಧ ಸಂಘಟನೆಗಳು ಇಂದು ಶೃಂಗೇರಿ ಬಂದ್ ಗೆ ಕರೆ ಕೊಟ್ಟಿವೆ.

ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಈಗಾಗಲೇ ಸಮ್ಮೇಳನಕ್ಕೆ ಸಹಕಾರ ಕೊಡಲ್ಲ ಎಂದಿದ್ದಾರೆ. ಸಮ್ಮೇಳನಕ್ಕೆ ಭದ್ರತೆ ಒದಗಿಸಲು ಚಿಕ್ಕಮಗಳೂರು ಎಸ್ಪಿ ನಿರಾಕರಿಸಿದ್ದಾರೆ. ಈ ನಡುವೆಯೂ ಸಮಾವೇಶ ನಡೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಿದ್ದ ಎಂದಿದೆ.

ಇಂದಿನಿಂದ ಎರಡು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಜಾತ್ರೆಗೆ ಕಸಪಾ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ವೇದಿಕೆ, ಸೇರಿ ಕಾರ್ಯಕ್ರಮ ದ ಸಿದ್ಧಗೊಂಡಿದೆ. ಹೀಗಾಗಿ ಬಂದ್ ನಡೆವೆಯೂ ನಡೆಯುತ್ತಾ ಕನ್ನಡ ಜಾತ್ರೆ? ಕನ್ನಡ ಜಾತ್ರೆಯಿಂದ ಸೃಷ್ಟಿಯಾಗುತ್ತಾ ಗೊಂದಲ? ಎನ್ನುವ ಆತಂಕ ಎದುರಾಗಿದೆ.

 

 

 

 

 

 

 

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights