ಹಗಲು ರಾತ್ರಿಯೆನ್ನದೇ ಸರ್ಕಾರಿ ನೌಕರರ ಸಂಘದಲ್ಲಿ ಅಂದರ್ ಬಾಹರ್…..!
ಹಗಲು ರಾತ್ರಿಯೆನ್ನದೇ ಹಾಸನ ನಗರದ ಆರ್ ಸಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದಲ್ಲಿ ಅಂದರ್ ಬಾಹರ್ ಆಡಿದ್ದು ಬೆಳಕಿಗೆ ಬಂದಿದೆ.
ಹೌದು… ನೌಕರರ ಸಂಘ ಕೆಲ ಕೆಎಎಸ್ ಅಧಿಕಾರಿಗಳು ಸೇರಿ ಎಲ್ಲಾ ಸರ್ಕಾರಿ ಸಿಬ್ಬಂದಿಗಳ ಜೂಜು ಅಡ್ಡೆಯಾಗಿದೆ. ಬೆಳಿಗ್ಗೆ ಔಟರ್ಸ್ ಸಂಜೆ ಮೆಂಬರ್ಸ್ ಕುಳಿತುಕೊಂಡು ಇಲ್ಲಿ ಜೂಜು ಆಡುತ್ತಾರೆ. ಸರ್ಕಾರಿ ನೌಕರರಂತೂ ಲಕ್ಷಾಂತರ ರೂ ಹಣ ಕಟ್ಟಿ ಜೂಜು ದಂಧೆಯಲ್ಲಿ ತೊಡಗಿಕೊಳ್ಳುತ್ತಾರೆ.
ಹೀಗಾಗಿ ಇಲ್ಲಿ ಪ್ರತಿನಿತ್ಯ ನೌಕರರ ಸಂಘದಲ್ಲಿ ಎಕ್ಕಾ ರಾಜ ರಾಣಿ ಸಪ್ಪಳ ಕೇಳಿಬರುತ್ತದೆ. ಎಸ್ ಪಿ ಕಚೇರಿ ಮುಂಭಾಗದಲ್ಲೇ ಅಧಿಕಾರಿಗಳು ಅಂದರ್ ಬಾಹರ್ ಆಡುತ್ತಿದ್ದರೂ ಯಾರೂ ಕೂಡ ಪ್ರಶ್ನೆ ಮಾಡಿಲ್ಲ. ಬೇಲಿನೇ ಎದ್ದು ಹೊಲ ಮೇಯುತ್ತಿರುವಾಗ ಪ್ರಶ್ನೆ ಮಾಡೋದು ಯಾರನ್ನ ಅನ್ನೋಹಾಗಾಗಿದೆ.