ಹಾಲು ಕುಡಿಸಿದ ಕೈಯಿಂದ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದ ತಾಯಿ….

ಗಂಡ ದುಡಿಯಲಿಲ್ಲ ಅಂತ ಮಗನಿಗೆ ಶಿಕ್ಷೆ ಕೊಟ್ಟ ದಾರುಣ ಘಟನೆಯೊಂದು ನಡೆದಿದೆ.

ಕ್ರೂರ ತಾಯಿಯೊಬ್ಬಳು ಹಾಲು ಕುಡಿಸಿದ ಕೈಯಿಂದ ತನ್ನ ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

ಪಾಪಿ‌ ತಾಯಿ ಮಗನನ್ನು ಕೊಂದು ಮನೆಯಲ್ಲಿಯೆ ಸಂಜೆವರೆಗೂ ಕುಳಿತಿದ್ದಳು. ಅಭಿನವ 16 ತಿಂಗಳ ಕಂದಮ್ಮ ತಾಯಿಯಿಂದ ಕೊಲೆಯಾಗಿದೆ. ಕವಿತಾ ಅಲಿಯಾಸ್ ಪ್ರತಿಮಾ ಕರುಳ ಬಳ್ಳಿಯ ಕೊಂದ ಕಟುಕ‌ ತಾಯಿ. ಗಂಡ ಪೆಟ್ರೋಲ್ ಬಂಕ್‌ಗೆ ತೆರಳಿದಾಗ ಈ ಘಟನೆ ನಡೆದಿದೆ. ಬೆಳಿಗ್ಗೆ ಕೊಲೆ ಮಾಡಿ‌ ಸಂಜೆವರೆಗೂ ಕಣ್ಣೀರು ಹಾಕದೆ ಕುಳಿತಿದ್ದ ಪಾಪಿ ತಾಯಿ, ಗಂಡ ಮನೆಗೆ ಬಂದಾಗ ಮಗ ಸತ್ತಿರುವುದು ನೋಡಿ ಶಾಕ್ ಆಗಿದ್ದಾನೆ.

ಪಾಪಿ‌ ತಾಯಿಯನ್ನ ಅರೆಸ್ಟ್ ಮಾಡಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಹಿಂದೆ ಎರಡ್ಮೂರು ಬಾರಿ ಕವಿತಾ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ತಾನೆ ಹೆತ್ತ ಒಂದೇ ಒಂದು ಮುದ್ದು ಕಂದನನ್ನು ಕರುಣೆ ಇಲ್ಲದೆ ಕೊಂದು ಹಾಕಿದ್ದಾರೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights