ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಪ್ರಿಯಕರನಿಗೆ ಕೋಟಿ ರೂಪಾಯಿ…!

ಬಾಗಲಕೋಟೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಗಂಡನಿಗೆ ಸ್ಕೇಚ್ ಹಾಕಿದ ಘಟನೆ ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಯಲ್ಲವ್ವ ವಡ್ಡರ ಮತ್ತು ಮಲ್ಲಪ್ಪ ಹೊದ್ಲೂರು ಮಧ್ಯೆ ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಯಲ್ಲವ್ವ ಪತಿ ಮಂಜುನಾಥ ವಡ್ಡರ(೩೫) ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧಕ್ಕೆ ಪ್ರಿಯಕರನ ಜೊತೆ ಸೇರಿ ಪತಿ ಕೊಲೆ ಮಾಡಲಾಗಿದೆ.

ಮಂಜುನಾಥ್ ವಡ್ಡರ ಎಂಬುವನಿಗೆ ಯಲ್ಲವ್ವಳನ್ನು ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ ವಡ್ಡರ ಸಂಗಾಪೂರ ಗ್ರಾಮದವರು. ಗಂಡನ ಮನೆ ಬಿಟ್ಟು ತವರು ಮನೆ ಬೇವೂರ ಗ್ರಾಮದಲ್ಲಿ ವಾಸವಾಗಿದ್ದ ಯಲ್ಲವ್ವ ಜೊತೆ ಮಲ್ಲಪ್ಪನ ಅನೈತಿಕ ಸಂಬಂಧವಿತ್ತು. ನಿನ್ನೆ ಬೇವೂರು ಗ್ರಾಮಕ್ಕೆ ಬಂದಿದ್ದ ಪತಿ ಮಂಜುನಾಥನಿಗೆ ಕೊಲೆ ಸ್ಕೇಚ್ ಹಾಕಿದ್ದ ಯಲ್ಲವ್ವಾ ಗಂಡನನ್ನ ಎಲ್ಲಿ ಅವಾ..? ಅಂತ ೂರು ಮಂದಿ ಪ್ರಶ್ನೆ ಮಾಡೋ ರೀತಿ ಮಾಡಿಬಿಟ್ಟಿದ್ಲು.

ಮಲ್ಲಪ್ಪ ಹೊದ್ಲೂರಿಂದ ಮಂಜುನಾಥ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಗೈದ ಆರೋಪಿ ಮೃತದೇಹವನ್ನು ಬೇವೂರು ಗ್ರಾಮದಿಂದ ಸಂಗಾಪೂರ ಗ್ರಾಮಕ್ಕೆ ತಂದು ಹಾಕಿದ್ದಾನೆ. ಆರೋಪಿಗಳಾದ ಮಲ್ಲಪ್ಪ ಹಾಗೂ ಯಲ್ಲವ್ವ ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ಬಾಗಲಕೋಟೆ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights