ಅಪ್ರಾಪ್ತೆ ಬಾಲಕಿಯೊಂದಿಗೆ ಪ್ರೀತಿ : ಪ್ರೀಯಕರನ ವಿರುದ್ಧ ಕೊಲೆ ಆರೋಪ..
ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸಿದ್ದ ಪ್ರೀಯಕರನ ವಿರುದ್ಧ ಕೊಲೆ ಆರೋಪ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹುಲ್ಲಿಕೇರಿ ಎಸ್ಪಿ ಗ್ರಾಮದಲ್ಲಿ ಕೇಳಿ ಬಂದಿದೆ.
16 ವರ್ಷದ ದ್ಯಾಮವ್ವ ಸಾವನ್ನಪ್ಪಿದ ಅಪ್ರಾಪ್ತೆ ಬಾಲಕಿ. 22 ವರ್ಷದ ಕುಮಾರ ಪಾಟೀಲ್ ಪ್ರೀಯಕರನ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಅಪ್ರಾಪ್ತೆ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಪ್ರೀತಿಸಿದ ಪ್ರೀಯಕರ ಬಾಲಕಿಗೆ ಅರಿಶಿನ ಕೊಂಬು ಕಟ್ಟಿ ಮದುವೆಯಾಗಿದ್ದಾನೆ. ಅಪ್ರಾಪ್ತೆ ಬಾಲಕಿಗೆ ವಿಷ ಕುಡಿಸಿ, ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ.
ಅಪ್ರಾಪ್ತೆ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಗುಳೇದಗುಡ್ಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಆದರೆ ಯುವಕ ಸಾಯುವ ನಾಟಕವಾಡಿ ಬದುಕುಳಿದಿದ್ದಾನೆಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಜೊತೆಗೆ ಬಾಲಕಿಗೆ ಮದುವೆಯಾಗಿರೋ ವಿಚಾರ ಹೇಳಿದ್ರೇ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. ಅಪ್ರಾಪ್ತೆ ಬಾಲಕಿ ಮನೆಯೊಳಗೆ ಪ್ರೀತಿ ಮದುವೆ ವಿಚಾರ ಗೊತ್ತಾಗಿದ್ದಕ್ಕೆ ಬಾಲಕಿಯನ್ನು ಕರೆದೊಯ್ದು ಕೊಲೆ ಮಾಡಿದ್ದಾನೆಂದು ಆರೋಪ ಕೇಳಿ ಬಂದಿದೆ.
ಕುಮಾರ್ ಪಾಟೀಲ್ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತೆ ಬಾಲಕಿ ತಂದೆ ಬಾಳಪ್ಪ ಎಂಬುವರಿಂದ ಕೊಲೆ ದೂರು ದಾಖಲಾಗಿದೆ.