ಕೊರೊನಾ ಸೋಂಕು ಇರುವುದಾಗಿ ಭಯಗೊಂಡ ವ್ಯಕ್ತಿ ಆತ್ಮಹತ್ಯೆಗೆ ಶರಣು..!
ಕೊರೊನಾ ಭೀತಿ ಜನರಲ್ಲಿ ಅದೆಷ್ಟು ಹೊಕ್ಕಿದೆ ಅಂದ್ರೆ ಕೊರೊನಾ ಬಾರದ ವ್ಯಕ್ತಿ ಕೊರೊನಾ ಬಂದಿದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು.
ಹೌದು.. ಆಶ್ವರ್ಯ ಎನ್ನಿಸಿದರೂ ನಿಜ. ಮಂಗಳೂರಿಗೆ ಗುಳೆಹೋಗಿದ್ದ ಗದಗನ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದ 40 ವರ್ಷದ ನಿವಾಸಿ ಗುರುಸಂಗಪ್ಪ ಜಂಗಣ್ಣವರ ನೇಣಿಗೆ ಶರಣಾದ ವ್ಯಕ್ತಿ. ಈ ವ್ಯಕ್ತಿ ಮಂಗಳೂರಿಗೆ ಗುಳೆಹೋಗಿದ್ದ. ಮೂರು ದಿನಗಳ ಹಿಂದೆ ಮಂಳೂರಿನಿಂದ ಕಲ್ಲಿಗನೂರು ಗ್ರಾಮಕ್ಕೆ ವಾಪಸ್ ಆಗಿದ್ದ. ನಂತರ ಜಂಗಣ್ಣ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆತನಲ್ಲಿ ವಿಪರೀತ ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಹೀಗಾಗಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದನು. ಈ ವೇಳೆ ತಪಾಸಣೆ ಮಾಡಿದ್ದ ವೈದ್ಯರು ಆತನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ ಎಂದು ದೃಢಪಡಿಸಿದ್ದರು.
ಆದರೂ ಆತನಿಗೆ ಜ್ವರ, ಕೆಮ್ಮು ಕಡಿಮೆ ಕಡಿಮೆಯಾಗಿರಲಿಲ್ಲ. ಆತಂಕಕ್ಕೆ ಒಳಗಾದ ಜಂಗಣ್ಣ ಮಂಗಳವಾರ ಗ್ರಾಮದ ಹೊರವಲಯದ ಜಮೀನಿನಲ್ಲಿದ್ದ ಹುಣಸೆ ಮರಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಗುರುಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಸ್ತಳಕ್ಕೆ ಭೇರಡಿ ನೀಡಿದ ಗಜೇಂದ್ರ ಗಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೃತನ ಹೆಂಡತಿ ಆತ ಆತಂಕಕ್ಕೆ ಒಳಗಾಗಿದ್ದನು ಎನ್ನು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇನ್ನುಷ್ಟು ಮಾಃಇತಿ ಕಲೆ ಹಾಕುತ್ತಿದ್ದಾರೆ.