ದಿಢೀರ್ ದಾಳಿ ಮಾಡಿದ ಕರಡಿ…! : ಸ್ಥಳೀಯರ ಕೂಗಾಟಕ್ಕೆ ಭಯದಿಂದ ಪಲಾಯನ…

ಇತ್ತೀಚೆಗೆ ಮೈಸೂರಿನ ಕೆಲ ಸ್ಥಳಗಳಲ್ಲಿ ಕಾಡು ಪ್ರಾಣಿಗಳ ಕಾಟ ಅಧಿಕವಾಗುತ್ತಿದೆ. ಕಾಡು ಬಿಟ್ಟು ನಾಡಿಗೆ ಕಾಡು ಪ್ರಾಣಿಗಳು ಆಹಾರ ಹರಿಸಿ ಬರುತ್ತಿವೆ. ಹೀಗಾಗಿ ಜನ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

ಹೌದು..  ಕರಡಿಯೊಂದು ದಾಳಿ ಮಾಡಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಈ ಘಟನೆ ನಡೆದಿದೆ.

ವಿಜಯ್ (25) ಕರಡಿ ದಾಳಿಯಿಂದ ಗಾಯಗೊಂಡ ಯುವಕ. ನಡೆದುಕೊಂಡು ಹೋಗುವ ವೇಳೆ ಕರಡಿ ದಿಢೀರ್ ದಾಳಿ ಮಾಡಿದೆ. ಸ್ಥಳೀಯರು ಕೂಗಿಕೊಂಡ ಹಿನ್ನೆಲೆ ಓಡಿ ಹೋಗಿದೆ. ಕರಡಿ ದಾಳಿಯಿಂದ ವಿಜಯ್ ಬಲಗೈಗೆ ತಲೆಗೆ ಗಂಭೀರ ಗಾಯಗೊಂಡಿದೆ. ಸ್ಥಳಕ್ಕೆ‌ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights