ಸಾ ರಾ ಮಹೇಶ್ ನೀನು ದುರ್ಯೋಧನನಂತೆ ನಾನು ಅರ್ಜುನನಂತೆ – ಹೆಚ್.ವಿಶ್ವನಾಥ್
ಮಹೇಶ್ ನೀನು ದುರ್ಯೋಧನನಂತೆ ನಾನು ಅರ್ಜುನನಂತೆ. ಮುಖಾಮುಖಿಯಾಗೋಕೆ ನಾನು ತಯಾರಾಗಿಯೇ ಬಂದಿದ್ದೇ. ನಾನು 8.50ಕ್ಕೆ ಬಂದು ದೇವಿಯ ದರ್ಶನ ಮಾಡಿ 9.05ಕ್ಕೆ ಬಂದು ಹೊರಗೆ ನಿಂತೆ. ಅವರು ಒಳಗೆ ಹೋದವರು ವಾಪಸ್ ಬರಲೇ ಇಲ್ಲ ಎಂದು ಚಾಮುಂಡಿಬೆಟ್ಟದಿಂದ ಇಳಿದು ಬಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ನಾನು 10ಗಂಟೆಯವರೆಗು ಕಾದೆ. ಆಮೇಲೆ ಮಾಧ್ಯಮದವರು ಹೇಳಿದ್ರು ಅವರು ನಿಮ್ಮ ಮುಖ ನೋಡೋಲ್ವಂತೆ ಅಂತ. ನೀವೇ ಪ್ರಮಾಣ ಮಾಡಬೇಕು ಅಂತ ಹೇಳಿದ್ರು. ನನಗೇನು ಹುಚ್ಚು ಹಿಡಿದಿದ್ಯಾ ಪ್ರಮಾಣ ಮಾಡೋಕೆ. ಆಣೆ ಪ್ರಮಾಣದ ವಿಚಾರ ಇಲ್ಲಿ ಬರೋದೆ ಇಲ್ಲ. ಸಾ.ರಾ.ಮಹೇಶ್ ಮಾಡಿದ್ದ ಆರೋಪಕ್ಕೆ ಉತ್ತರಿಸಲು ಬಂದಿದ್ದೆ.
25 ಕೋಟಿಗೆ ನನ್ನನ್ನ ಕೊಂಡುಕೊಂಡವನನ್ನು ಕರೆದುಕೊಂಡು ಬಾ ಅವನ್ನನ್ನ ಮೀಟ್ ಮಾಡೋಣ ಎಂದಿದ್ದೆ. ಕೊನೆಗು ಅವರು ಬರಲೇ ಇಲ್ಲ. ಆತನನ್ನು ಕರೆದುಕೊಂಡು ಬರಲಿಲ್ಲ. ಮಹಾಭಾರತದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಅಡಗಿ ಕುಳಿತ ಹಾಗೇ ಒಳಗೆ ಕುಳಿತುಕೊಂಡೆ. ನಾನು ಅರ್ಜುನಾಧಿ ಸ್ನೇಹಿತರಂತೆ ಹೊರಗೆ ಕಾಯ್ತಿದ್ವಿ. ಮಹೇಶ್ ನೀನು ಬರಲೇ ಇಲ್ಲ ಹೇಡಿ.
ನೀನು ಪಲಾಯನವಾದಿ. ನೀನೋಬ್ಬ ಸುಳ್ಳ. ಇನ್ಮುಂದೆ ಸುಳ್ಳು ಹೇಳಬೇಡ. ಜೆಡಿಎಸ್ ಅಂದ್ರೆ ಕಣ್ಣಿರು, ಕಣ್ಣಿರು ಅಂದ್ರೆ ಜೆಡಿಎಸ್. ಸಾ.ರಾ.ಮಹೇಶ್ ಅಂತ ಕೊಚ್ಚೆಗುಂಡಿಗೆ ನಾನು ಕಲ್ಲು ಎಸೆಯೋಲ್ಲ. ನಾನು ನಿಲ್ಲಿಸೋಣ ಅಂತ ಅಂದಿದ್ದೆ. ಈಗಲೂ ಹೇಳ್ತಿದ್ದಿನಿ ಇಲ್ಲಿಗೆ ನಿಲ್ಲಿಸೋಣ. ಅವರು ಸಾಬೀತು ಮಾಡಬೇಕಿತ್ತು ಮಾಡಿಲ್ಲ. ಇನ್ಮುಂದೆ ಸಾ.ರಾ.ಮಹೇಶ್ ವಿಚಾರವನ್ನ ನಾನು ಮಾತನಾಡೋಲ್ಲ. ಅವರು ನನ್ನ ವಿಚಾರ ಮಾತನಾಡೋದು ಬೇಡ ಎಂದು ವಿಶ್ವಾನಾಥ್ ಹೇಳಿದರು.
ಚಾಮುಂಡಿಬೆಟ್ಟದಿಂದ ಇಳಿದು ಬಂದು ಸ್ನೇಹಿತರೊಂದಿಗೆ ಹೊಟೇಲ್ನಲ್ಲಿ ತಿಂಡಿ ತಿಂದ ಹೆಚ್.ವಿಶ್ವನಾಥ್, ಚಾಮುಂಡೇಶ್ವರಿ ಬೆಟ್ಟದ ಹಣೆ ಪ್ರಮಾಣದ ಹೈಡ್ರಾಮಾ ಮುಗಿಸಿ ಹೊರಟರು.