ಯುಪಿ: ಗ್ಯಾಸ್ ಸಿಲಿಂಡರ್ ಸ್ಫೋಟ : ಓರ್ವ ಯುವಕ ಸಾವು : ಇಬ್ಬರಿಗೆ ಗಾಯ!
ಉತ್ತರಪ್ರದೇಶದ ಬಲರಾಂಪುರ ನಗರ ಕೊಟ್ವಾಲಿ ಪ್ರದೇಶದ ಗದುರಾಹ್ವಾ ಎಂಬಲ್ಲಿನ ಮನೆಯೊಂದರಲ್ಲಿ ಎಲ್ಪಿಜಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡಿದೆ. ಇದರಿಂದಾಗಿ ಅನೇಕ ಮನೆಗಳ ಛಾವಣಿಗಳು ಧರೆಗುರುಳಿವೆ. ಈ ಘಟನೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಅತ್ತಿಗೆ ಅಡುಗೆ ಮಾಡುತ್ತಿದ್ದರು ಎಂದು ಮೊಹಮ್ಮದ್ ಅಕ್ರಮ್ ಅಲಿಯಾಸ್ ಬಬ್ಲು ಅವರ ಸಹೋದರ ಸಬ್ಲು ಹೇಳಿದ್ದಾರೆ. ಈ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದಿಂದಾಗಿ ಏಳು ಎಂಟು ಮನೆಗಳು ಭಾರಿ ನಷ್ಟವನ್ನು ಅನುಭವಿಸಿವೆ. ಪಕ್ಕದ ಮನೆಯಲ್ಲಿದ್ದ ನಂಕಾನೆ ಅಲಿ (16) ಎಂಬ ಬಾಲಕ ಗೋಡೆ ಬಿದ್ದು ಮೃತಪಟ್ಟಿದ್ದಾನೆ. ಅಕ್ರಮ್ ಮನೆಯ ಮಹಿಳೆಯರಾದ ಸುಬ್ರಾ ಮತ್ತು ರೂಬಿ ಗಾಯಗೊಂಡಿದ್ದಾರೆ. ಇಬ್ಬರೂ ಮಹಿಳೆಯರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಎಲ್ಪಿಜಿ ಸಿಲಿಂಡರ್ ಸ್ಫೋಟದಿಂದಾಗಿ ಅಪಘಾತ ಸಂಭವಿಸಿದೆ ಎಂದು ಜನರು ತಿಳಿಸಿದ್ದಾರೆ. ಜನರು ಸ್ಫೋಟಕ್ಕೆ ಸಂಬಂಧಿಸಿದ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದೆ. ಅನೇಕ ಮನೆಗಳ ಕಿಟಕಿಗಳ ಗಾಜು ಕೂಡ ಮುರಿದುಹೋಗಿದೆ. ಇಡೀ ಪ್ರದೇಶದಲ್ಲಿ ಕೋಲಾಹಲ ಉಂಟಾಗಿದೆ. ಇನ್ಸ್ಪೆಕ್ಟರ್ ರಜಿತ್ ರಾಮ್ ಸಿಒ ಸಿಟಿ ಮನೋಜ್ ಯಾದವ್ ಮತ್ತು ಸದರ್ ಎಸ್ಡಿಎಂ ನಾಗೇಂದ್ರ ನಾಥ್ ಯಾದವ್ ಸ್ಥಳಕ್ಕಾಗಮಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.