ಅಬ್ದುಲ್ ಕಲಾಂ ಪ್ರತಿಮೆಗೆ ಹೂ ಇಟ್ಟ ವೃದ್ದ ವೈರಲ್!: ಅಸೂಯೆಯಿಂದ ವೃದ್ಧನನ್ನೇ ಕೊಂದ ತಿಳಿಗೇಡಿ!
ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಪ್ರತಿದಿನ ಹೂ ಮಾಲೆ ಇಡುತ್ತಿದ್ದ ಬಡ ವೃದ್ದರೊಬ್ಬರನ್ನು ಅಸೂಯೆಯಿಂದ ಕೊಲೆ ಗೈದಿರುವ ಅಮಾನವೀಯ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಕೇರಳದ ಕೊಚ್ಚಿಯ ಮರೀನ್ಡ್ರೈವ್ನಲ್ಲಿರುವ ಶಿವದಾಸನ್ ಎಂಬುವವರು ಪ್ರತಿದಿನ ಕಲಾಂ ಅವರ ಪ್ರತಿಮೆಗೆ ಹೂ ಇಡುತ್ತಿದ್ದ ಬಡ ವೃದ್ಧನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ವಿಡಿಯೋ ಭಾರೀ ವೈರಲ್ ಅಗಿದ್ದರಿಂದಾಗಿ ವೈದ್ದನ ಮೇಲೆ ಪ್ರಶಂಸೆ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿ ಮಿಂಚಿದ್ದನ್ನು ಸಹಿಸದ ತಿಳಿಗೇಡಿಗಳು ವೈದ್ದನ ಮೇಲೆ ಅಸೂಯೆ ಪಟ್ಟು ಹತ್ಯೆ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಶಿವದಾಸನ್ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಭಿಮಾನಿಯಾಗಿದ್ದು, ಅವರು ಎರಡು ಬಾರಿ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದ್ದರಂತೆ. ಭೇಟಿಯಾಗಿದ್ದ ಸಂದರ್ಭದಲ್ಲಿ ಅಬ್ದುಲ್ ಕಲಾಂ ಅವರು ಶಿವದಾಸನ್ಗೆ 500 ರೂಪಾಯಿ ಕೊಟ್ಟಿದ್ದರು. ಕಲಾಂ ಅವರ ಮೇಲಿನ ಅಭಿಮಾನದಿಂದ ಅವರು ಪ್ರತಿದಿನ ಕೊಚ್ಚಿಯಲ್ಲಿರುವ ಅಬ್ದುಲ್ ಕಲಾಂ ಅವರ ಪ್ರತಿಮೆಗೆ ಹೂವಿನ ಅಲಂಕಾರ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿಯಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಪ್ರಶಂಸೆ ಪಡೆದಿತ್ತು.
ಜಾಲತಾಣದಲ್ಲಿ ಪ್ರಶಂಸೆ ಪಡೆದ ವೃದ್ದನ ಮೇಲೆ ಕೆಲವರು ಅಸೂಯೆ ಪಟ್ಟಿದ್ದ ರಾಜೇಶ್ ಎಂಬಾತ ಅವರ ಜೊತೆ ಜಗಳ ಮಾಡಿದ್ದ. ಗಲಾಟೆ ನಡೆದ ಕೆಲವೇ ದಿನಗಳಲ್ಲಿ ವೃದ್ದನ ಹತ್ಯೆಯಾಗಿದೆ. ಡಿಸೆಂಬರ್ 16ರಂದು ಶಿವದಾಸನ್ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಈ ಕುರಿತಾಗಿ ತನಿಖೆ ನಡೆಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ರಾಜೇಶ್ ಎಂಬಾತ ವೃದ್ದನ ಜೊತೆ ಜಗಳ ಮಾಡಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ರಾಜೇಶ್ ಮೇಲೆ ಕೊಲೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಒಂದು ಮಿಲಿಯನ್ ವಂಚನೆ: ನೀರವ್ ಮೋದಿ ವಿರುದ್ಧ ಅಮೆರಿಕಾದಲ್ಲಿ ಕೇಸ್!